ಸಿಂದಗಿ: ತಾಲೂಕಿನಲ್ಲಿ ಮಾಜಿ ಸೈನಿಕರ ಸಂಘ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಜನಮನ ಸೆಳೆದಿದೆ. ಪ್ರಸ್ತುತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೈನಿಕ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನೀಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದಲ್ಲಿ ತಾಲೂಕಿನ ಮಾಜಿ ಸೈನಿಕರಿಗೆ ಭವನ ನಿರ್ಮಾಣ ಮಾಡಲು ಗಾಯಕವಾಡ ಲೇಔಟ್ನಲ್ಲಿ ಮಂಜೂರಾದ ಖಾಲಿ ನಿವೇಶನದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಶಾಸಕರ ನಿಧಿಯಿಂದ ರೂ.೫ಲಕ್ಷ ಅನುದಾನ ಮತ್ತು ಮಾಜಿ ಸಚಿವ ದಿ.ಎಂ.ಸಿಮನಗೂಳಿ ಅವರ ಪ್ರತಿಷ್ಠಾನದಿಂದ ರೂ.೧ಲಕ್ಷ ದೇಣಿಗೆ ನೀಡುವೆ. ಅವರ ಬಹು ದಿನಗಳ ಬೇಡಿಕೆ ಈಡೇರಿಕೆಯಾಗಿದೆ. ಈ ಕಾರ್ಯಕ್ಕೆ ಶ್ರಮಿಸಿದವರು ಅಭಿನಂದನಾರ್ಹರು ಎಂದರು.
ಈ ವೇಳೆ ಮಾಜಿ ಸೈನಿಕ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಯಳಮೇಲಿ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರು ಚುನಾವಣೆಯಲ್ಲಿ ಗೆದ್ದ ಮೇಲೆ ಅವರಿಗೆ ಸನ್ಮಾನಿಸಲು ಎಲ್ಲ ಹೋದ ಸಂದರ್ಭದಲ್ಲಿ ಸಮುದಾಯ ಭವನಕ್ಕೆ ನಿವೇಶನ ಕುರಿತು ಚರ್ಚಿಸಲಾಗಿತ್ತು. ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಸ್ವತಃ ಅವರೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಿವೇಶನ ಮಂಜೂರಾಗಲೂ ಸಹಕರಿಸಿದ್ದಾರೆ. ಅವರಿಗೆ ನಾವೆಲ್ಲರೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಆರ್.ಡಿ.ದೇಸಾಯಿ, ಎಚ್.ಎಂ.ಉತ್ನಾಳ, ಬಿ.ಜಿ.ಕೋಟರಗಸ್ತಿ, ಸಿದ್ದಪ್ಪ ಕಾರೆಮುಂಗಿ, ಭಾಗಪ್ಪ ಬಂಡಗಾರ, ಮುತ್ತಪ್ಪ ಸಿಂಗೇಗೋಳ, ಶಬ್ಬೀರಪಟೇಲ್ ಬಿರಾದಾರ, ಎಸ್.ಎ.ಬಿರಾದಾರ, ಶರಣಗೌಡ ಬಿರಾದಾರ, ಮಹಿಬೂಬಪಟೇಲ್ ಬಿರಾದಾರ, ಬಸವರಾಜ ಚೌಧರಿ, ಪಿ.ಕುಲಕರ್ಣಿ, ಕೆ.ಚಾಂದಕವಟೆ, ಬಾಬುಗೌಡ ಬಿರಾದಾರ, ಈರಣ್ಣ ತಳವಾರ ಸೇರಿದಂತೆ ಸಿಂದಗಿ ತಾಲೂಕಿನ ಮಾಜಿ ಸೈನಿಕರು ಉಪಸ್ಥಿತರಿದ್ದರು.