ಸಿಂದಗಿ; ದಿ.ಎಂ.ಸಿ.ಮನಗೂಳಿಯವರು ರೈತರ ಒಡನಾಡಿಯಾಗಿ ಗ್ರಾಮ ಸೇವಕರಾಗಿ ಕಾರ್ಯನಿರ್ವಹಿಸಿ ರಾಜಕೀಯಕ್ಕೆ ಪ್ರವೇಶ ಹೊಂದಿದ್ದಾಗಿನಿಂದ ಅವರ ಅಭಿಮಾನಿಯಾಗಿರುವ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆಯವರನ್ನು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಚೇರಮನ್ ಅಶೋಕ ಮನಗೂಳಿಯವರು ಅವರ ತಂದೆಯವರ ಗೌರವ ಹೆಚ್ಚಿಸಿದ್ದಾರೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಅಭಿಮತ ವ್ಯಕ್ತ ಪಡಿಸಿದರು.
ಪಟ್ಟಣದ ಕುರುಡೆ ಕಾಂಪ್ಲೆಕ್ಸನಲ್ಲಿ ಹಮ್ಮಿಕೊಂಡ ನೂತನವಾಗಿ ಟಿಎಸ್ಪಿ ಮಂಡಳಿಯ ನಿರ್ದೆಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದವತಿಯಿಂದ ಗೌರವಿಸಿ ಮಾತನಾಡಿ, ವ್ಹಿ.ಬಿ.ಕುರುಡೆಯವರು ಸತತ 32 ವರ್ಷ ಕೃಷಿ ಇಲಾಖೆಯಲ್ಲಿ ರೈತರ ಒಡನಾಡಿಯಾಗಿ ಕೆಲಸ ಮಾಡಿದ್ದಾರೆ ಅದಕ್ಕೆ ಟಿಎಸ್ಪಿ ಮಂಡಳಿಯ ಚೇರಮನ್ ದಿ.ಎಂ.ಸಿ.ಮನಗೂಳಿಯವರು ರೈತರ ಒಡನಾಡಿಯಾಗಿದ್ದರಿಂದ ಇವರನ್ನು ನಿರ್ದೇಶಕರನ್ನು ಆಯ್ಕೆ ಮಾಡಿದ್ದರೆ ಅವರ ತಂದೆಯವರಿಗೂ ಹಾಗೂ ತಾಲೂಕಿನ ರೈತರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಈ ನಿರ್ಣಯ ತೆಗೆದುಕೊಂಡಿದ್ದು ಸೂಕ್ತವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ನಿರ್ದೇಶಕ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆಯವರು ಮಾತನಾಡಿ, ದಿ.ಎಂ.ಸಿ.ಮನಗೂಳಿ ಕಾಕಾ ಅವರ ಅಭಿಮಾನಿಯಾಗಿದ್ದ ನನ್ನನ್ನು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಚೇರಮನ್ ಅಶೋಕ ಮನಗೂಳಿಯವರು ನನಗೆ ಇನ್ನೂ ಸಮಾಜದ ಹಾಗೂ ತಾಲೂಕಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದರೆ ಅವರಿಗೆ ಅಭಿನಂದನೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಆರ್.ಡಿ.ದೇಸಾಯಿ, ಅರವಿಂದ ಹಂಗರಗಿ, ಶಂಕರ ಕುರುಡೆ, ಚೇತನಗೌಡ ಪಾಟೀಲ, ರುದ್ರಗೌಡ ಬಿರಾದಾರ ನಿವೃತ್ತ ಶಿಕ್ಷಕರು, ಶಿವರಾಜ ಪೊ.ಪಾಟೀಲ, ರಾಮಚಂದ್ರ ಕಲಬುರ್ಗಿ ಸೇರಿದಂತೆ ಹಲವರು ಇದ್ದರು.