“ಸರ್ವ ಮಕ್ಕಳು ನಮ್ಮ ದೇಶದ ಆಸ್ತಿಗಳು”

Must Read

ಸಿಂದಗಿ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ಹಾಕಲು ಶಿಕ್ಷಕರು ಹಾಗೂ ಪಾಲಕರಿಗೆ ಪ್ರೋತ್ಸಾಹ ಅತ್ಯಗತ್ಯ ಎಂದು ಸಾಹಿತಿ ಬಸವರಾಜ ಅಗಸರ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಕಾಯಕ ಶಿಕ್ಷಣ ಸಂಸ್ಥೆಯ ಅಂಗವಾಗಿ ನಡೆಯುವ ಯುನಿಕ್ ಆಂಗ್ಲ ಭಾಷೆಯ ಹಾಗೂ ಡಾ.ಕೆ ಎಸ್.ಮಠ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ ಆದರೆ ಅದನ್ನು ಗುರುತಿಸಿ ಅವರಲ್ಲಿ ಇರುವ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸಲು ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹದಂಥ ಸಲಹೆ ಮಾರ್ಗದರ್ಶನ ನೀಡುವುದು ತುಂಬಾ ಅಗತ್ಯವಾಗಿದೆ ಎಂದರು.

ಕಾಯಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಸ್ವಾಮಿ ಹತ್ತರಕಿಹಾಳಮಠ ಮಾತನಾಡಿ, ಮಕ್ಕಳು ನಮ್ಮ ದೇಶದ ಸರ್ವ ಸಂಪತ್ತು ಅವರಿಗೆ ನಮ್ಮ ಭಾರತೀಯ ಸಂಸ್ಕೃತಿ ಕಲಿಸಿ ಅವರಿಗೆ ಒಳ್ಳೆಯ ಸಂಸ್ಕಾರ ಗುಣಗಳು ಜೀವನದಲ್ಲಿ ರೂಡಿಸಿ ಕೊಳ್ಳುವಂತೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಅವರು ಮಕ್ಕಳ ಮುಂದೆ ಸುಂದರವಾಗಿ ಜಾನಪದ ಹಾಡುಗಳು ಹಾಡಿದರು.

ಶಾಲಾ ಮುಖ್ಯಗುರುಮಾತೆ ಶ್ರೀಮತಿ ವಿಜಯಲಕ್ಷ್ಮೀ ಶ್ರೀಶೈಲ ಹಿರೇಮಠ ಸಭೆ ಅಧ್ಯಕ್ಷತೆ ವಹಿಸಿದ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ನೂತನ ವಿಷಯಗಳನ್ನು ಆಟ ಪಾಠ ಹಾಡು ಕಲಿಯುತ್ತಾ ಉತ್ತಮ ಜ್ಞಾನದ ಭಂಡಾರವನ್ನು ಹೆಚ್ಚಿಸಿ ಕೊಳ್ಳಬೇಕು ಎಂದರು.

ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಸಹನಾ ಹಿರೇಮಠ,ಸಹನಾ ಜೋಗೂರ,ರೇಷ್ಮಿ ಹಿರೇಮಠ,ರಾಖೇಶ ಹೂಗಾರ ಸಸಿಗೆ ನೀರುಣಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲಾ ವಿದ್ಯಾರ್ಥಿಗಳಾದ ಕುಮಾರ ರಾಕೇಶ ಹೂಗಾರ,ಆಕಾಶ ಪಾಟೀಲ, ಚನ್ನು ನಿಗಡಿ,ಸಹನಾ ಜೋಗೂರ, ಸಾವಿತ್ರಿ ಬಿರಾದಾರ, ಗುರುರಾಜ ನಿಗಡಿ,ಶ್ವೆತಾ ಹಿರೇಮಠ,.ಸಾಧಿಕಾ ನದಾಪ, ವಿಜಯ ಬಿರಾದಾರ, ಮೌನೇಶ, ಅಮೃತಾ ಗೌಡರ,ವಿಶಾಲ,ಪ್ರತೀಕ,ಆಕಾಶ, ಖುಷಿ, ಶರಣು,ಶ್ರೇಯಾ,ಮಲ್ಲಿಕಾರ್ಜುನ,ಆದಿತ್ಯ ಪ್ರಶಾಂತ,ಆಕಾಶ, ಶರಣು, ಸುಮಂತ ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಭಾಷಣ ಹಾಡು ಕಥೆ ಆಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಶಾಲಾ ಶಿಕ್ಷಕರಾದ ಅಶೋಕ ಗೌಡರ,ಯಲಗೊಂಡ, ಪೂಜಾರಿ, ಬಸವರಾಜ ಬಿರಾದಾರ, ಶ್ರೀಪಾದ ನಾನಸ್ಕರ, ರಾಜೇಶ್ವರಿ, ಶ್ರೀಮತಿ ಪಾಟೀಲ,ಶ್ರೀಮತಿ ಭಾರತಿ,ಶ್ರೀಧರ ಬಡಿಗೇರ ಭಾಗವಹಿಸಿದ್ದರು.

ಕುಮಾರಿ ಸಹನಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group