Homeಸುದ್ದಿಗಳುಮಾ.26 ರಿಂದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಮಹಾ ಸಮ್ಮೇಳನ

ಮಾ.26 ರಿಂದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಮಹಾ ಸಮ್ಮೇಳನ

ಸಿಂದಗಿ: ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಮಹಾಸಮ್ಮೇಳನವು ಮಾರ್ಚ 26 ರಿಂದ ಎಪ್ರೀಲ್ 6 ರವರೆಗೆ ಅತ್ಯಂತ ಅರ್ಥ ಪೂರ್ಣವಾಗಿ ಸಿಂದಗಿ ಸಾರಂಗಮಠದಲ್ಲಿ ಜರುಗಲಿದೆ ಎಂದು ಪಟ್ಟಣದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸಾರಂಗಮಠದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ವಿಜಯಪುರ ಘಟಕ, ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ ಸಿಂದಗಿ ಸಹಯೋಗದಲ್ಲಿ ಶನಿವಾರ ನಡೆದ ಆದಿ ಜಗದ್ಗುರು ಪಂಚಾಚಾರ್ಯರರ ಯುಗಮಾನೋತ್ಸವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಮಹಾಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾ.26 ರಂದು ಸಿದ್ದಾಂತ ಶಿಖಾಮಣಿಯ ಕರ್ತೃ ಸಾಲೋಟಗಿಯ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳ ಕರ್ತೃಗದ್ದುಗೆಯಿಂದ ಪಾದಯಾತ್ರೆಯ ಮೂಲಕ ಸಿಂದಗಿಯ ಸಾರಂಗಮಠಕ್ಕೆ ಜ್ಯೋತಿ ತರುವುದು. ಮಾರ್ಚ 27 ರಿಂದಎಪ್ರೀಲ್5 ರ ವರೆಗೆ ಷಟಸ್ಥಲ, ಅಷ್ಟಾವರಣ, ಪಂಚಾಚಾರಗಳ ಮಹತ್ವದ ಕುರಿತು ಸಾರಂಗಮಠದ ಆವರಣದಲ್ಲಿ ಪ್ರವಚನ ನಡೆಯಲಿದೆ. ಈ ಸಂಧರ್ಭದಲ್ಲಿ ಅಯ್ಯಾಚಾಯ, ಲಿಂಗದೀಕ್ಷೆ, ಉಚಿತ ನೇತ್ರ ತಪಾಷಣಾ ಶಿಬಿರ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳಲ್ಲದೆ ಸಿಂದಗಿಯ ತಾಲೂಕಿನ ನೆರೆ-ಹೊರೆ ಗ್ರಾಮಗಳಲ್ಲಿ ವೀರಶೈವಧರ್ಮದ ತತ್ವ ಸಿದ್ದಾಂತಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಾಡಿನ ಅನೇಕ ಪೂಜ್ಯರ ನೇತೃತ್ವದಲ್ಲಿ ಜರುಗಲಿದೆ.

ಎಪ್ರೀಲ್ 6 ರಂದು ಬೆಳಗ್ಗೆ 8 ಗಂಟೆಗೆ ಸಾರಂಗಮಠದಿಂದ ಆದಿ ಜಗದ್ಗುರು ಪಂಚಾಚಾರ್ಯರರ ಭಾವಚಿತ್ರಗಳ ಹಾಗೂ ಶ್ರೀ ಸಿದ್ದಾಂತ ಶಿಖಾಮಣಿ ಧರ್ಮಗ್ರಂಥದ ಉತ್ಸವ ಹಾಗೂ ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಜಾಲಹಳ್ಳಿ ಬೃಹನ್ಮಠದ ವಿದ್ಯಾಮಾನ್ಯ ಶಿವಾಭಿನವ ಜಯ ಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಭವ್ಯ ಮೆರವಣಿಗೆಯು ಪಟ್ಟಣದ ವಿವಿಧ ಬೀದಿಗಳ ಮೂಲಕ ಶ್ರೀ ಸಾತವೀರೇಶ್ವÀರ ಸಭಾಭವನಕ್ಕೆ ತಲುಪುವುದು. ನಂತರ ಅಂದು ಮುಂಜಾನೆ 11 ಗಂಟೆಗೆ ಆದಿ ಜಗದ್ಗುರು ಪಂಚಾಚಾರ್ಯರರ ಯುಗಮಾನೋತ್ಸವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಮಹಾ ಸಮ್ಮೇಳನವು ವಿವಿಧ ರಾಜ್ಯಗಳ ಅನೇಕ ಪೂಜ್ಯರ ಸಾನಿಧ್ಯದಲ್ಲಿ ಜರುಗಲಿದೆ ಎಂದರು. ಕೊಕಟನೂರ ಶ್ರೀಗಳು, ದೇವರಹಿಪ್ಪರಗಿ ಶ್ರೀಗಳು, ರಟಗಲ್ ಶ್ರೀಗಳು, ಕಲಕೇರಿ ಶ್ರೀಗಳು, ಗೋಲಗೇರಿ ಶ್ರೀಗಳು, ಬಸವನ ಬಾಗೇವಾಡಿ ಶ್ರೀಗಳು, ಕನ್ನೋಳ್ಳಿ ಶ್ರೀಗಳು, ಜಮಖಂಡಿ ಶ್ರೀಗಳು, ಕೆರೂಟಗಿ ಶ್ರೀಗಳು, ಕಲಬುರಗಿ ಶ್ರೀಗಳು, ಇಂಡಿ ಶ್ರೀಗಳು, ಡೋಣುರ ಶ್ರೀಗಳು, ಜೈನಾಪೂರ ಶ್ರೀಗಳು, ಮೈಂದರಗಿ ಶ್ರೀಗಳು, ಯಂಕಂಚಿ ಶ್ರೀಗಳು, ಬೆನಕನಹಳ್ಳಿ ಶ್ರೀಗಳು, ನಾಗಪೂರಶ್ರೀಗಳು, ಶಿರಶ್ಯಾಡ ಶ್ರೀಗಳು, ಕೊಣ್ಣೂರ ಶ್ರೀಗಳು, ಕಡಕೋಳ ಶ್ರೀಗಳು, ಬೆಂಗಳೂರ ಶ್ರೀಗಳು ಆಸಂಗಿಹಾಳ ಆರೂಢ ಮಹಾರಾಜರು ಸೇರಿದಂತೆ ಅನೇಕ ಮಠಾಧೀಶರು ಹಾಗೂ ಶ್ರೀಮಠದ ಅನೇಕ ಭಕ್ತವೃಂದದವರು ಭಾಗವಹಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group