ಸಿಂದಗಿ: ಮನುಕುಲವನ್ನು ಕಾಡುತ್ತಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಇದು ಉಂಟು ಮಾಡುವ ನೋವು ಮತ್ತು ಇನ್ನಿತರ ಸಮಸ್ಯೆಗಳು ಅನೇಕ. ಕಳವಳದ ವಿಷಯವೇನೆಂದರೆ ಕ್ಯಾನ್ಸರ್ ರೋಗ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ಜನರು ವಿವಿಧ ಬಗೆಯ ಕ್ಯಾನ್ಸರ್ ನಿಂದ ನರಳುತ್ತಿದ್ದಾರೆ ಎಂದು ಐ.ಸಿ.ಟಿ.ಸಿ. ಆಪ್ತಸಮಾಲೋಚಕ ಚನ್ನಬಸವಣ್ಣ ಎಂ ದೇಗಿಲ್ ಹೇಳಿದರು.
ತಾಲೂಕಿನ ಮೋರಟಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿ, ಶ್ವಾಸಕೋಶ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಜಠರ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಬ್ಲಡ ಕ್ಯಾನ್ಸರ್ ಇತ್ಯಾಧಿ, ಕ್ಯಾನ್ಸರಗಳಲ್ಲಿ 20% ಕ್ಯಾನ್ಸರ್ ಎಚ್.ಪಿವ್ಹಿ ಮತ್ತು ಎಚ್.ಬಿ.ವ್ಹಿ ಗಳಿಂದ ಉಂಟಾಗುತ್ತಿದ್ದು, ಎಚ್.ಪಿವ್ಹಿ ಅಂದರೆ ಗರ್ಭಕಂಠದ ಕ್ಯಾನ್ಸರ್, ಯಕೃತ ಕ್ಯಾನ್ಸರ್, ಅಲ್ಲದೆ ಪುರುಷರು ಶ್ವಾಸಕೋಶ ಕ್ಯಾನ್ಸರ್, ಜಠರ ಕ್ಯಾನ್ಸರ್, ಯಕೃತ ಕ್ಯಾನ್ಸರ್, ದೊಡ್ಡ ಕರಳು, ಗುದುನಾಳ ಮತ್ತು ಅನ್ನನಾಳ ಅಂಶಗಳಿಂದ ಕ್ಯಾನ್ಸರ್ ಸಾವುಗಳಿಗೆ ಕಾರಣವಾಗಿವೆ. ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಜಠರ ಕ್ಯಾನ್ಸರ್, ದೊಡ್ಡ ಕರಳು, ಗರ್ಭಕಂಠ ಕ್ಯಾನ್ಸರ್ ಅಲ್ಲದೆ ಪ್ರತಿಶತ 222 ರಷ್ಟು ತಂಬಾಕು ಸೇವನೆಯಿಂದ ಸಾವುಗಳಾಗಿವೆ ಇದನ್ನು ಬಿಡುವುದರ ಮೂಲಕ ಪ್ರಕೋಪ (ತೀವ್ರತೆ) ತಗ್ಗಿಸಬಹುದು.ಮೂಲ ಅವಸ್ಥೆಯಲ್ಲಿಯೆ ಪರೀಕ್ಷೆಗೊಳಪಡಿಸಿ ಸೂಕ್ತ ಚಿಕಿತ್ಸೆಯ ಮೂಲಕ ನಿವಾರಿಸಬಹುದು ಎಂದರು.
ಚಿಕ್ಕ ಮಕ್ಕಳ ತಜ್ಞೆ ಡಾ. ಸರೋಜಿನಿ ದಾನಗೊಂಡ ಮಾತನಾಡಿ, ಇಂದಿನ ಜಾಗತಿಕ ಯುಗದಲ್ಲಿ ನಗರೀಕರಣ ಹೆಚ್ಚುತ್ತಿದ್ದು, ಮಾನವನ ಜೀವನ ಶೈಲಿಯು ತುಂಬಾ ಬದಲಾಗುತ್ತದೆ, ಮನುಷ್ಯ ಹಿಂದಿನವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆಯುತ್ತಿರುವುದಿಲ್ಲ ಹಾಗೂ ಹಿಂದಿನ ಜನರ ಆಹಾರ ಪದ್ದತಿಯನ್ನು ಅನುಸರಿಸುತ್ತಿಲ್ಲಾ ಹಾಗೂ ಈಗಿನ ಫಾಸ್ಟ್ ಫುಡ್ಗೆ ಜನರು ಮೊರೆ ಹೋಗುತ್ತಿದಾರೆ, ದವಸ ಧಾನ್ಯಗಳು ಹಾಲು, ಹಣ್ಣು, ತರಕಾರಿಗಳನ್ನು ಸೇವಿಸುತ್ತಿಲ್ಲ ಎಲ್ಲಾ ಆಹಾರದಲ್ಲಿ ಕಲಬೆರಕೆ ಮತ್ತು ವಿಷಪೂರಿತ ಕೀಟ ನಾಶಕವನ್ನು ಬಳಸುತ್ತಿದ್ದು, ಮನುಷ್ಯನ ರೋಗ ನಿರೋಧಕ ಶಕ್ತಿ ಕುಂದುತ್ತಿದೆ, ಪ್ರತಿಯೊಂದು ರೋಗವು ಮನುಷ್ಯನನ್ನೇ ತಿಂದು ಹಾಕುತ್ತಿದೆ ಅದನ್ನು ತಡೆಯುವ ಶಕ್ತಿ ಪ್ರಸ್ತುತ ಮನುಷ್ಯನಿಗೆ ಸಾಧ್ಯವಾಗುತ್ತಿಲ್ಲ,ಇದಕ್ಕೆ ಮುಖ್ಯ ಕಾರಣವೇ ಅವನ ಜೀವನ ಶೈಲಿ. ಕ್ಯಾನ್ಸರ್ ಕೂಡಾ ಮನುಷ್ಯನ ಅನುವಂಶೀಯ ಹಾಗೂ ಜೀವನ ಪದ್ಧತಿಗೆ ಅವಲಂಬನೆ ಆಗಿದೆ, ಪುರುಷರು ಹಾಗೂ ಮಹಿಳೆಯರಲ್ಲಿ ಕ್ಯಾನ್ಸರ್ ಮೊದಲನೇ ಹಂತದಲ್ಲಿ ಕಂಡು ಹಿಡಿದರೇ ಮಾತ್ರ ಅದಕ್ಕೆ ಚಿಕಿತ್ಸೆ ಸಿಗುತ್ತದೆ ಇಲ್ಲವಾದರೆ ಅದು 3 – 4 ನೇ ಹಂತಕ್ಕೆ ಹೋಗಿ ಮನುಷ್ಯನು ಮರಣ ಹೊಂದುತ್ತಾನೆ ಎಂದು ವಿವರಿಸಿದರು.
ಎನ್.ಸಿ.ಡಿ.ವೈದ್ಯಾಧಿಕಾರಿ ಸೋಮನಗೌಡ ಪಾಟೀಲ್ ಮಾತನಾಡಿ, ಎನ್.ಸಿ.ಡಿ.ಘಟಕದಲ್ಲಿ ದೊರೆಯುವ ಉಚಿತ ಸೌಲಭ್ಯಗಳಾದ ಕ್ಯಾನ್ಸರ್ ಕಾಯಿಲೆ, ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಕಾಯಿಲೆ ಇತ್ಯಾದಿ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು ಮತ್ತು ಫೇ 04 ರಿಂದ 10 ರವರೆಗೆ ಸಮುದಾಯ ಆರೋಗ್ಯ ಕೇಂದ್ರ ಮೋರಟಗಿ ಅಡಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೈನುದ್ದೀನ್ ಮನಿಯಾರ, ಜಿ ಎಸ್ ಕುರಿ, ಗೀತಾ ಹಂಗರಗಿ, ಈರಣ್ಣ ಪಾಟೀಲ, ಆರ್ ಎಸ್ ಬಾಗಿ, ಪ್ರಭು ಅರಳಿ, ಗುರಲಿಂಗಯ್ಯ ಮಠಪತಿ, ಶ್ರೀನಾಥ ಹಿಟ್ಟಿನ್ ಹಾಗೂ ಆಸ್ಪತ್ರೆಯ ಸಿಬ್ಬಂಧಿ ವರ್ಗದವರು ಹಾಗೂ ಆಶಾ ಕಾರ್ಯಕತೆಯರು ಭಾಗಿಯಾಗಿದ್ದರು.