Homeಸುದ್ದಿಗಳುಆನಂದ ಅಪ್ಪುಗೋಳ ಬಂಧನ

ಆನಂದ ಅಪ್ಪುಗೋಳ ಬಂಧನ

ಬೆಳಗಾವಿ – ಗ್ರಾಹಕರಿಗೆ ಸುಮಾರು ೨೫೦ ಕೋಟಿ ರೂ. ವಂಚನೆ ಎಸಗಿದ್ದ ಸಂಗೊಳ್ಳಿ ರಾಯಣ್ಣ ಕೋ ಆಪ್ ಸೊಸಾಯಿಟಿ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಕೋ ಆಪ್ ಕ್ರೆಡಿಟ್ ಸೊಸಾಯಿಟಿಗೆ ಠೇವಣಿ ರೂಪದಲ್ಲಿ ಹಣ ಪಡೆದುಕೊಂಡು ಮರಳಿ ನೀಡದೆ ವಂಚಿಸಿದ್ದ ಆನಂದ ಅಪ್ಪುಗೋಳ ವಿರುದ್ಧ ನೂರಾರು ಗ್ರಾಹಕರು ವಂಚನೆಯ ಕೇಸ್ ದಾಖಲಿಸಿದ್ದರು. ಇಷ್ಟು ವರ್ಷ ಜಾಮೀನಿನ ಮೇಲೆ ಹೊರಗೆ ಇದ್ದ ಅಪ್ಪುಗೋಳ ಬಂಧನ PMLA ೨೦೦೨ ರ ಕಾಯ್ದೆಯಡಿ ಕೊನೆಗೂ ಆಗಿದೆ.

ಈ ನಡುವೆ ಆನಂದ ಅಪ್ಪುಗೋಳ ಅವರು ಹೋರಾಟಗಾರ ಸಂಗೊಳ್ಳಿ ರಾಯಣ್ಣ ನ ಕುರಿತು ಸಿನೆಮಾ ಮಾಡಿ ಸುದ್ದಿಯಲ್ಲಿದ್ದರು. ಚಿತ್ರ ಅಪಾರ ಯಶಸ್ವು ಗಳಿಸಿದರೂ ಆನಂದ ಅವರು ಸೊಸಾಯಿಟಿಯಲ್ಲಿ ಕೈ ಸುಟ್ಟುಕೊಂಡು ಸಾವಿರಾರು ಗ್ರಾಹಕರ ಸುಮಾರು ೨೫೦ ಕೋಟಿ ರೂ. ವಂಚಿಸಿದ್ದರು

RELATED ARTICLES

Most Popular

error: Content is protected !!
Join WhatsApp Group