Homeಸುದ್ದಿಗಳುದಸರಾ ಕವಿಗೋಷ್ಠಿಗೆ ಅನ್ನಪೂರ್ಣಾ ಹಿರೇಮಠ ಆಯ್ಕೆ

ದಸರಾ ಕವಿಗೋಷ್ಠಿಗೆ ಅನ್ನಪೂರ್ಣಾ ಹಿರೇಮಠ ಆಯ್ಕೆ

ಬೆಳಗಾವಿ: ವಿಶ್ವ ವಿಖ್ಯಾತ ಮೈಸೂರು ದಸರಾದ ಈ ಬಾರಿಯ ಕವಿಗೋಷ್ಠಿಗೆ ನಗರದ ಕವಯಿತ್ರಿ ಡಾ.ಅನ್ನಪೂರ್ಣಾ ಹಿರೇಮಠ ಆಯ್ಕೆಯಾಗಿದ್ದಾರೆ.

ದಸರಾ ಕವಿಗೋಷ್ಠಿ ಸಮಿತಿಯ ವತಿಯಿಂದ ಅಕ್ಟೋಬರ್ 1ರಂದು ಬೆಳಿಗ್ಗೆ 10.30ಕ್ಕೆ  ಆಯೋಜಿಸಿರುವ ಪ್ರಾದೇಶಿಕ ಕವಿಗೋಷ್ಠಿಯಲ್ಲಿ ಅವರು ಕವನ ವಾಚನ ಮಾಡಲಿದ್ದಾರೆ.

ಅಂದು ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಆವರಣದಲ್ಲಿರುವ ರಾಣಿಬಹದ್ದೂರ್ ಸಭಾಂಗಣದಲ್ಲಿ ನೂತನ ದೋಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ ಎಂದು ದಸರಾ ಕವಿಗೋಷ್ಠಿಯ ಕಾರ್ಯಾಧ್ಯಕ್ಷ ಪ್ರೊ.ಎಂ.ಜಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

1 COMMENT

Comments are closed.

Most Popular

error: Content is protected !!
Join WhatsApp Group