ಸಿಂದಗಿ: ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆ ಸೃಷ್ಟಿ ಮಾಡುವುದಾದರೆ ಸಿಂದಗಿ ಜಿಲ್ಲಾ ಕೇಂದ್ರವಾಗಿ ಮಾರ್ಪಡಿಸಲು ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಉಪವಿಭಾಗಾಧಿಕಾರಿಗಳು ಇಂಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಾಧನಾ ಸಂಘಟನೆಯ ಅನಸುಬಾಯಿ ಪರಗೊಂಡ, ಜನಜಾಗೃತಿ ಸಂಘಟನೆಯ ನೀಲಮ್ಮ ಯಡ್ರಾಮಿ, ಶಾಮಲಾ ಮಂದವಾಲಿ, ಅನುಸುಬಾಯಿ ಮೇಲಿನಮನಿ, ಜಯ ಕರವೇಯ ಗೌಸಿಯಾ ಶೇಖ, ಜಯಶ್ರೀ ನಾಟೀಕಾರ, ಲಕ್ಷ್ಮೀ ಕಲಾಲ, ಯಮನಾಬಾಯಿ ಮಾದರ, ಅನ್ನಪೂರ್ಣ ದೇವಕರ ಸೇರಿದಂತೆ ಅನೇಕರು ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಾ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಭೌಗೋಳಿಕವಾಗಿ ಜನಸಂಖ್ಯೆಯನ್ನು ಹೊಂದಿದ್ದು ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ ಸಿಂದಗಿಯ ಕೇಂದ್ರಸ್ಥಾನದಲ್ಲಿದ್ದು ಸುತ್ತ ಮುತ್ತಲಿನ ಕಲಬುರ್ಗಿ ಯಾದಗಿರಿ ರಾಯಚೂರ ವಿಜಯಪುರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದ್ದು ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಬೋಧನೆ ಮಾಡುವುದರೊಂದಿಗೆ ರಾಜ್ಯದಲ್ಲಿ ಹೆಸರುವಾಸಿಯಾಗಿ ಶೈಕ್ಷಣಿಕ ಕಾಶಿ ಎಂದನಿಸಿಕೊಂಡಿದೆ ಹಾಗೂ ದಿನದ 24 ಗಂಟೆಯು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ್ದು ಮುಂಬೈ ಚೆನೈ ವಾಣಿಜ್ಯ ಕಾರಿಡಾರ ಚತುಷ್ಕೋನ ರಸ್ತೆ ಸಿಂದಗಿ ನಗರಕ್ಕೆ ಹೊಂದಿಕೊಂಡಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ ಅದರಂತೆ ರಾಷ್ಟ್ರೀಯ ಹೆದ್ದಾರಿ-50 ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ ಶೇಡಬಾಳದಿಂದ ಶಾಹಾಬಾದ ರೇಲ್ವೆ ಮಾರ್ಗವು ಮುಂಬರುವ ದಿನಮಾನಗಳಲ್ಲಿ ನೂತನ ರೇಲ್ವೇ ಮಾರ್ಗ ಸೃಷ್ಟಿಯಾಗುವ ಲಕ್ಷಣಗಳಿದ್ದು ಸುತ್ತ-ಮುತ್ತಲಿನ ಎಲ್ಲಾ ತಾಲೂಕಾಗಳಿಗೆ 20 ರಿಂದ 40 ಕಿಮೀ ವ್ಯಾಪ್ತಿಯನ್ನು ಹೊಂದಿದೆ ಇದರಿಂದ ಇಂಡಿ ಜಿಲ್ಲೆಯನ್ನು ಸೃಷ್ಟಿಸದೇ ಸಿಂದಗಿಯನ್ನು ಜಿಲ್ಲಾ ಕೇಂದ್ರವೆಂದು ಪರಿಗಣಿಸಿ ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಸಿಂದಗಿ ಆಲಮೇಲ ದೇವರಹಿಪ್ಪರಗಿ ತಾಳಿಕೋಟಿ ಈ ತಾಲೂಕಾಗಳನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದರೇ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಸಿಂದಗಿ ಜಿಲ್ಲಾ ಕೇಂದ್ರಕ್ಕೆ ಸೇರಿಸಿ ಹೊಸ ಜಿಲ್ಲೆ ಸೃಷ್ಟಿ ಮಾಡಬೇಕು ಈ ಎಲ್ಲ ಅಂಶಗಳನ್ನು ಗಮನದಲ್ಲಿಕೊಂಡು ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.