Homeಸುದ್ದಿಗಳುಮುಖ್ಯ ಶಿಕ್ಷಕರಿಗೆ ಎ ಬಿ ಸಿ ವಲಯ ವರ್ಗಾವಣೆ ಮಾಡಲು ಡಿ ಡಿ ಪಿ ಐ...

ಮುಖ್ಯ ಶಿಕ್ಷಕರಿಗೆ ಎ ಬಿ ಸಿ ವಲಯ ವರ್ಗಾವಣೆ ಮಾಡಲು ಡಿ ಡಿ ಪಿ ಐ ರವರಿಗೆ ಮನವಿ

ಬೆಳಗಾವಿ: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ಆಗದೆ ಇರುವ ಎ ಬಿ ಸಿ ವಲಯಗಳ ವರ್ಗಾವಣೆ ಕೌನ್ಸಿಲಿoಗ ನಡೆಸಿ ಕೂಡಲೇ ಸ್ಥಳ ಹೊಂದಾಣಿಕೆ ಮಾಡಿಕೊಡುವಂತೆ ಡಿ ಡಿ ಪಿ ಐ ಬಸವರಾಜ ನಾಲತವಾಡ ರವರಿಗೆ ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಇಂದು ಸಂಜೆ ಮನವಿ ನೀಡಲಾಯಿತು.

ಜೊತೆಗೆ ಜಿಲ್ಲೆಯಲ್ಲಿರುವ ಖಾಲಿ ಇರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಅರ್ಹ ಸಹಶಿಕ್ಷಕರಿಗೆ ಬಡ್ತಿ ನೀಡುವಮೂಲಕ ಭರ್ತಿ ಮಾಡಬೇಕು ಈ ಪ್ರಕ್ರಿಯೆ ಶೀಘ್ರ ಆರಂಭಿಸುವಂತೆ ಮನವಿ ಮಾಡಿದರು.

ಶಿಕ್ಷಣ ಇಲಾಖೆಯು ಸಹ ಸದ್ಯದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಮುಖ್ಯ ಶಿಕ್ಷಕರ ಎ ಬಿ ಸಿ ವಲಯ ವರ್ಗಾವಣೆ ಹಾಗೂ ಸಹ ಶಿಕ್ಷಕರಿಗೆ ಬಡ್ತಿ ನೀಡುವoತೆ ಆದೇಶ ನೀಡಿದ್ದು ಜಿಲ್ಲೆಯಲ್ಲಿ ಕೂಡಲೇ ಆರಂಭ ಮಾಡಲು ಮನವಿ ಮಾಡಲಾಯಿತು.

ಮನವಿ ಸ್ವೀಕರಿಸಿದ ಡಿ ಡಿ ಪಿ ಐ ರವರು ಈ ತಿಂಗಳು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಎ ಬಿ ಸಿ ವಲಯಗಳ ವರ್ಗಾವಣೆ ಮತ್ತು ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕಾರ್ಯಕ್ಕೆ ಚಾಲನೆ ನೀಡುವ ಭರವಸೆ ನೀಡಿದರು.

ಮನವಿ ನೀಡುವ ಸಮಯದಲ್ಲಿ ಸಂಘದ ಜಿಲ್ಲಾ ಗೌರವಧ್ಯಕ್ಷ ಶಶಿಧರ ರೊಟ್ಟಿ, ಜಿಲ್ಲಾ ಅಧ್ಯಕ್ಷ ಬಿ ಎಸ್ ಹುಣಸಿಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ, ನಗರಘಟಕದ ಅಧ್ಯಕ್ಷ ಎ ಡಿ ಸಾಗರ, ಪ್ರಧಾನಕಾರ್ಯದರ್ಶಿ ಬಿ ಬಿ ಹಟ್ಟಿಹೋಳಿ, ಪದಾಧಿಕಾರಿಗಳಾದ ರಾಜೇಂದ್ರಕುಮಾರ ಚಲವಾದಿ, ಶ್ರೀ ಮತಿ ಎಸ್ ಜಿ ರಜಪೂತ,ಪಿ ಕೆ ಘೋಲಪೆ, ಪ್ರಕಾಶ ಕಾಂಬಳೆ, ಶ್ರೀಮತಿ ವಿ ಆರ್ ನಾಯ್ಕ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group