Homeಸುದ್ದಿಗಳುಬೀದರ್ ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ

ಬೀದರ್ ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ

ಬೀದರ – ಅಕ್ರಮ ಸಂಪತ್ತು ಗಳಿಕೆಯ ಆರೋಪದ ಮೇಲೆ ಯಾದಗಿರಿ ವಲಯ ಅರಣ್ಯಾಧಿಕಾರಿ ರಮೇಶ್ ಪೀರಣ್ಣ ಕನಕಟ್ಟಿ ಅವರ ಮನೆ ಮೇಲೆ ಎಸಿಬಿ ರೇಡ್ ನಡೆಸಿದೆ.

ಬೀದರ್ ಹಾಗೂ ಚಿಟಗುಪ್ಪಾ ತಾಲೂಕಿನ ಉಡಬಾಳನಲ್ಲಿರುವ ಅವರ ಮನೆಯ ಮೇಲೆ ಬೀದರ್- ಕಲಬುರಗಿಯ ಎಸಿಬಿ ತಂಡದಿಂದ ಏಕಕಾಲಕ್ಕೆ ದಾಳಿ ಕೈಗೊಳ್ಳಲಾಗಿದೆ.

ಆರ್ಎಫ್ಒ ರಮೇಶ್ ಪೀರಣ್ಣ ಕನಕಟ್ಟಿ ಮೂಲತಃ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದವರು. ತಮ್ಮ ಗಳಿಕೆಗಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆಂಬ ಆರೋಪದ ಮೇರೆಗೆ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಕಲಬುರಗಿ ಎಸ್ಪಿ ಅಮರನಾಥ ರೆಡ್ಡಿಯವರ ಮಾರ್ಗದರ್ಶನದಲ್ಲಿ ಎಸಿಬಿ ತಂಡ ಈ ದಾಳಿ ಕೈಗೊಂಡಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group