Times of ಕರ್ನಾಟಕ

ಟಂಕಾಗಳು

೧ ಭುಗಿಲೆದ್ದಿದೆ ಜಗವು ಭಯದಲಿ ಮಹಾಮಾರಿಯೇ ನೀ ತಂದ ಫಜೀತಿಗೆ ಸಾವೂ ಹೆದರುತಿದೆ ೨ ಒಕ್ಕಲೆದ್ದಿದೆ ನೆಲೆಯು ಸಿಗದಲೆ ಮಾರಿ ಕೊರೋನಾ ಹೆಚ್ಚುವ ಭೀತಿಯಲಿ ಹುಚ್ಚು ಹಿಡಿಯುತಿದೆ ೩ ಭಯಗೊಂಡಿದೆ ಜಗದ ಜನವಿಂದು ಮಾರಿಗೌಷಧಿ ಸಿಗದ ಕಾರಣಕೆ ಸಾವಿಗೆ ಹೆದರಿದೆ ೪ ದಿಕ್ಕುಗಾಣದೆ ಜನ ಕಂಗಾಲಾಗಿದೆ ಸಾವು ನೋವಿನ ಲೆಕ್ಕ ಸಿಗದುದರ ಭಯಕೆ ಬೆದರಿದೆ ೫ ರೋಗ ಮುಕ್ತಿಗೆ ಭವವು ಬಯಸಿದೆ ಕೈ ಮುಗಿಯತ ಮೊರೆಯನಿಡುತಿದೆ ಧರೆಯ ದೇವರಲಿ. ಡಾ.ಗಜಾನಂದ ಸೊಗಲನ್ನವರ ಚಿಕ್ಕಬಾಗೇವಾಡಿ

ಮೂಗಿನಲ್ಲಿ ತುಪ್ಪ ಹಾಕಿಕೊಳ್ಳಿ ಅನೇಕ ಪ್ರಯೋಜನಗಳುಂಟು !!

ಮಾನವ ಶರೀರದ ದೋಷಗಳಾದ ವಾತ, ಪಿತ್ತ ದೋಷಗಳನ್ನು ಸಮತೋಲಿತವಾಗಿ ಇಡಲು ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆಯೆಂದು ಆಯುರ್ವೇದ ಹೇಳುತ್ತದೆ. ತುಪ್ಪವನ್ನು ಮೂಗಿನಲ್ಲಿ ಹಾಕುವ ನಸ್ಯ ಥೆರಪಿ ಈ ದೋಷಗಳನ್ನು ಸಮತೋಲಿತವಾಗಿ ಕಾಪಾಡುತ್ತವೆ ಎನ್ನಲಾಗಿದೆ.ವಾತ ಹಾಗೂ ಪಿತ್ತ ದೋಷದ ಸಂಕೇತಗಳಾದ ಮೈಗ್ರೇನ್, ಮಾನಸಿಕ ಗೊಂದಲ, ಉದ್ವೇಗ, ಖಿನ್ನತೆ, ಫೋಬಿಯಾ, ನಿದ್ರಾಹೀನತೆ ಇವುಗಳಲ್ಲಿ ತುಪ್ಪವನ್ನು ಮೂಗಿನಲ್ಲಿ ಹಾಕುವ...

ಗುರು ಪೂರ್ಣಿಮಾ ಕವನಗಳು

ಗುರುವಿಗೆ... ಗುರುವೇ...ವರಗುರುವೇ... ಮಹಾಗುರುವೇ...ಪರಮಗುರುವೇ...ಸದ್ಗುರುವೇ... ನಿನಗೆ ಶರಣು,ಸಾವಿರದ ಶರಣು.... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ...

ಕವನಗಳು

💕💭💭 ಮತ್ತದೇ ಕನಸು 💭💭💕 ಹೊಡೆದರೂ ಸಿಡಿದೇಳುತಿದೆ ಆ ಕನಸು ನಾನಾಗಬಾರದೇ "ಭಗವಂತ" ॥ ತಮದೊಳು ಸಿಲುಕಿಹ ಜೀವಿಗಳು "ಬಾ" "ಬಾ" ಎಂದು ಕರೆಯುತಿರುವಾಗ, ತನು~ಮನವೆಲ್ಲಾ ಕಣ್ಣಾಗಿಸಿ ಕಾಯುವೆ, ಕತ್ತಿ ~ಬಾಂಬು~ಚೂರಿ, ಮಾರಕಾಸ್ತ್ರ ನಾಶಗೊಳಿಸಿ ಪ್ರೀತಿ~ಪ್ರೇಮ~ಅಹಿಂಸೆ ಸಿಡಿಸಿ ಆತ್ಮೀಯ ಕಿಡಿಹಚ್ಚಿದ ಕನಸು ಕ್ಷಣವೂ ಏರಲು ಹವಣಿಸುತಿಹುದು । ಅಹಂಕಾರದಲಿ ಬೀಗುತಾ.. ಸಜ್ಜನರಿಗೆ " ಕಣ್ಣು ಕುರುಡು" ದೇವನಿಗೆ " ಬುದ್ಧಿ ಬರಡು" ಎಂದು ಪೇಳುವ ಸಜ್ಜನ ಮೊಗ ಹೊತ್ತ ನಿರಹಂಕಾರಿಗೆ ಪಶ್ಚಾತ್ತಾಪದ ಕೊರಗು ನೀಡಿ...

ಭೇರ್ಯ ರಾಮಕುಮಾರ್ ಅವರ ಕವನಗಳು

ಒಂದು ಪ್ರೇಮಕಥೆ.. ಹಾರುವ ಹಕ್ಕಿಗೆ ಈಜು ಕಲಿಸಿದವರು ಯಾರು? ಚಿಟ್ಟೆಯ ರೆಕ್ಕೆಗೆ ಸುಂದರ ಚಿತ್ರ ಬರೆದವರು ಯಾರು? ಕೋಗಿಲೆಗೆ 'ಕುಹೂ,ಕುಹೂ' ಹಾಡು ಕಲಿಸಿದವರು ಯಾರು ? ಹರಯದ ಸುಂದರ ಹೃದಯಗಳಿಗೆ, ಪ್ರೀತಿಯ' ಕಾಮನ ಬಿಲ್ಲು' ನೀಡಿದವರ್ಯಾರು??? ಬದುಕಲಿ ಬಂದುದು ಸುಂದರ ಹರಯ ಬಿರುಗಾಳಿಯೂ ಸುಳಿಗಾಳಿ ಮೋಡ-ಕೋಲ್ಮಿಂಚುಗಳೂ ತಂಪೆರೆವ 'ಓಯಸಿಸ್' ಪ್ರಿಯತಮೆಯ ನೋಡಿದಾಗ ನವಿಲು ನಾಟ್ಯವಾಡಿದಂತೆ,ಪನ್ನೀರ ಮಳೆ ಸುರಿದಂತೆ!!! ಕಣ್ಣುಗಳಲ್ಲಿ ಸನ್ನೆ,ತುಟಿಯಂಚಲಿ ಸಿಹಿನಗು, ನುಡಿವ ಮಾತೆಲ್ಲವೂ ಕಾವ್ಯಮಯ, ಎತ್ತ ತಿರುಗಿದರತ್ತ ಕಾಮನಬಿಲ್ಲು, ಪ್ರಿಯನಿಗೆ ಪ್ರಿಯತಮೆಯೇ ಸರ್ವಸ್ವ, ಪ್ರಿಯೆಗೆ ಪ್ರಿಯನ ಸಂಗವೇ ಸುಂದರ...

ಕವನ-ಹನಿ-ಹಾಯ್ಕು

ಹನಿ ಹನಿ ಇಬ್ಬನಿ ಸಂಸಾರ ಸೂತ್ರಕ್ಕೆ ತಕ್ಕಂತೆ ಇದ್ದರೆ ಎಲ್ಲಾ ಸಸಾರ ಬಿಡಬೇಕು ಒಮ್ಮೊಮ್ಮೆ ಇಬ್ಬರೂ ಹಟ ಇಲ್ಲವಾದರೆ ಬಾಳು ಸೂತ್ರ ಹರಿದ ಗಾಳಿಪಟ!! ಸುಮಂಗಲೆ ಮಂಗಳನ ಅಂಗಳವ ತಲುಪಿದರೆ ಏನು? ಮಂಗಳಸೂತ್ರದ ಬೆಲೆಯ ಅರಿತಿಹಳು ಹೆಣ್ಣು ಏಳು ಬೀಳುಗಳಲಿ ಗಂಡನಿಗೆ ಸಮನಾಗಿ ಮುದ್ದಾದ ಮಕ್ಕಳಿಗೆ ಮೊದಲನೇ ಗುರುವಾಗಿ ಸತಿಯಾಗಿ ಮತಿಯಾಗಿ ಬಾಳಿದರೆ ಸಾಕಲ್ಲವೇ? ನಮಗೇಕೆ ಬೇರೆ ಗೊಡವೆ? ಸ(ವಿ)ರಸ ಊಟದೊಳಗಿರಬೇಕು ಉಪ್ಪಿನಕಾಯಿಯಂತೆ ಉಪ್ಪಿನಕಾಯಿ ಊಟವಾದರೆ ಪಿತ್ತ ಕೆರಳುವುದಂತೆ ಎಲ್ಲಕ್ಕೂ ಮಿತಿಯುಂಟು ಮೀರಿದರೆ ಕಗ್ಗಂಟು ಸಮರಸದ ನಂಟು ಸ್ವರ್ಗಕ್ಕದು ಮೆಟ್ಟಿಲು.... ಎಂಟೇ.... ಎಂಟು...!! ಸತಿ ಪತಿ ಸಂಸಾರದ ಪಥದಲ್ಲಿ ಸತಿ ಸರಸತಿ ಆದರೆ ಪತಿ ಪರಬ್ರಹ್ಮ ಇಬ್ಬರಿಗೂ ಇರುವುದು ಅವರವರದೆ ಧರ್ಮ ನಡು ನಡುವೆ ಬರದಂತೆ ತಡೆದರಾಯ್ತು...

ಕವನ (ಜೂನ್ 21 ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಈ ಕವನ)

*ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ* ಸರಳ ವ್ಯಕ್ತಿತ್ವದ,ಸೇವಾ ತತ್ಪರ ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ, ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರನರ್ತನ, ಊರು ತೊರೆದು ತೋಟ ಸೇರಿದ ಕುಟುಂಬ, ಸುಂದರ ಹಸಿರು ಪರಿಸರದಲ್ಲಿ ಅಪ್ಪನ ಜನನ.... ಗದ್ದೆ ,ತೋಟ ಕಂಡರೆ ವಿಪರೀತ ಪ್ರೀತಿ, ವೃತ್ತಿಯಲಿ ಶಿಕ್ಷಕ,ಪ್ರವೃತಿಯಲಿ ಕೃಷಿಕ, ಹಸು ಕಟ್ಟಿ,ಸೆಗಣಿ ಬಾಚಿ,ತೋಟ ಬಳಸಿ, ಸೈಕಲ್ಲೇರಿ ಶಾಲೆಗೆ ಹೊರಡುತ್ತಿದ್ದ ಸಮಯಪಾಲಕ,ಅಪರೂಪದ ಶಿಕ್ಷಕ ನಮ್ಮಪ್ಪ... ಹುಟ್ಟಿದೂರಿಗೆ ಪಾಠ ಹೇಳುವ ಐನೋರಾಗಿ, ಕರ್ತವ್ಯ ನಿರ್ವಹಿಸಿದ ಊರವರಿಗೆ ತಿಳಿಹೇಳುವ ಮಾರ್ಗದರ್ಶಕರಾಗಿ, ವ್ಯಾಜ್ಯಗಳ ಪರಿಹರಿಸುವ...

ಅಪ್ಪಾss ಐ ಲವ್ ಯೂ ಪಾ….!!

*ಅಪ್ಪ* ಎಷ್ಟೇ ಪ್ರಯತ್ನಿಸಿದರು ಬರೆಯಲಾಗುತ್ತಿಲ್ಲ ಅಪ್ಪಾ... ನೀನ್ಯಾಕೊ ಪದಗಳಿಗೆ ಸಿಗುತ್ತಿಲ್ಲ...!! ಹೆಗಲ ಮೇಲೆ ಹೊತ್ತು ಜಗವತೋರಿದವನು ಎದೆಗೆ ಅವುಚಿಕೊಂಡು ಮುದ್ದಿಸಿದವನು ನೀನು ಅಪ್ಪಾ..... ನೀನ್ಯಾಕೋ ರಾಗಕೆ ಸಿಗುತ್ತಿಲ್ಲ...!! ಸಮಾನ ಹಕ್ಕು ಕೊಟ್ಟು ಹೆಮ್ಮೆ ಪಟ್ಟವನು ನೀನು ನಿಷ್ಠೆಯನು ನಿತ್ಯ ರೂಢಿಯಲಿ ತಂದವನು ಅಪ್ಪಾ.... ನಿನ್ಯಾಕೊ ಅರಿವಿಗೆ ಸಿಗುತ್ತಿಲ್ಲ....!! ಮೌಲ್ಯಗಳನು ಪುಟಕ್ಕಿಟ್ಟ ಕುಶಲಕರ್ಮಿ ನೀನು ಪ್ರೀತಿಯ ಸಿರಿವಂತಿಕೆ ಉಣಸಿದ ಸಾಹುಕಾರ ಅಪ್ಪಾ.... ನೀನ್ಯಾಕೊ ಲೆಕ್ಕಕ್ಕೆ ಸಿಗುತ್ತಿಲ್ಲ.....!! ಸತತ ದುಡಿದ ಕಾಯಕಯೋಗಿ ನೀನು ಜಗದ ಸುಖವನೆಲ್ಲಾ ನನ್ನ ಬೊಗಸೆಗೆ ತಂದವ ನೀನು..... ಅಪ್ಪಾ ನೀನ್ಯಾಕೊ ವ್ಯಾಖ್ಯಾನಕ್ಕೆ ಸಿಗುತ್ತಿಲ್ಲ...!! *ಡಾ. ನಿರ್ಮಲಾ ಬಟ್ಟಲ**ಅಪ್ಪ* ಅಪ್ಪ ಎಂಬ ಪದವು ಅಮೃತವು ತಂದೆಯೆಂದರೆ ತನ್ಮಯವು//ಪ// ಮನೆ...

ಗಲವಾನ್ ಸೇತುವೆ ಕಾರ್ಯ ಮುಕ್ತಾಯ !

ಚೀನಾ ಜೊತೆಗಿನ ಸಂಘರ್ಷದ ಹೊರತಾಗಿಯೂ ಭಾರತದ ಇಂಜಿನಿಯರ್ ಗಳು ಪೂರ್ವ ಲಡಾಕ್ ನ ಗಲವಾನ್ ನದಿಯ ಮೇಲೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾರ್ಯ ಮುಗಿಸಿದ್ದಾರೆ.ಈ ಸೇತುವೆಯಿಂದಾಗಿ ಭಾರತದ ಯೋಧರು ನದಿಯನ್ನು ಸುಲಭವಾಗಿ ದಾಟಿ ದಾರ್ಬುಕ್ ನಿಂದ ದಕ್ಷಿಣದ ಕೊನೆಯ ಪೋಸ್ಟ್ ಆದ ದೌಲತ್ ಬೇಗ್ ಓಲ್ಡೀ ವರೆಗಿನ 255 ಕಿ. ಮೀ...

ಶರಣ ಶರಣೆಯರೆಲ್ಲರಿಗೂ ಶರಣು ಶರಣಾರ್ಥಿಗಳು 🙏🙏🙏🙏

ಹನ್ನೆರಡನೆ ಶತಮಾನದ ಶಿವಶರಣರು ರಚಿಸಿದ ವಚನ ಸಾಹಿತ್ಯವು ಶರಣರ ಅನುಭವದ ನುಡಿಗಳು ಜೀವನದ ಸಹಜ ಘಟನೆಗಳನ್ನು ಅತ್ಯಂತ ಅಥ೯ಪೂಣ೯ವಾಗಿ ಹೇಳಿದ ಶರಣರ ಮಾತುಗಳೇ ಇಂದು ವಚನಗಳಾಗಿವೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ,ಬದ್ಧತೆಯ ಬದುಕು ನಿವ೯ಹಿಸಿದ 12 ನೇ ಶತಮಾನದ ಶರಣರ ನಡೆ ನುಡಿ ಒಂದಾಗಿದ್ದವು. ಈ ಕಾರಣಕ್ಕೆ 13 ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ...

About Me

11616 POSTS
1 COMMENTS
- Advertisement -spot_img

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...
- Advertisement -spot_img
error: Content is protected !!
Join WhatsApp Group