ಬೆಳಗಾವಿಯ ತನ್ಮಯ ಚಿಂತನ ಚಾವಡಿ ವತಿಯಿಂದ ಡಾ.ಜಯಾನಂದ ಧನವಂತ ರವರ ಬಾಳ ರಶ್ಮಿ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 8 ಜನವರಿ 2024 ರಂದು ಸಂಜೆ 4ಗಂಟೆಗೆ ಬೆಳಗಾವಿಯ ಮಹಾಂತೇಶ ನಗರದ ಮಹೇಶ ಪಿ .ಯು. ಕಾಲೇಜಿನಲ್ಲಿ ನಡೆಯಲಿದೆ.
ಈ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೃತ್ಯುಂಜಯ ಸ್ವಾಮಿಗಳು ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ ವಹಿಸಿಕೊಂಡು ಪುಸ್ತಕ ಬಿಡುಗಡೆಯನ್ನು ಮಾಡುವರು. ವಿಶ್ರಾಂತ ಪ್ರಾಚಾರ್ಯರಾದ ಎಸ್ ಆರ್ ಹಿರೇಮಠ ಅವರು ಮಾಡಲಿದ್ದಾರೆ. ಪುಸ್ತಕ ಪರಿಚಯವನ್ನು ಪ್ರಾಚಾರ್ಯರಾದ ಡಾ.ಎಂ.ವಿ ಭಟ್ ರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ ಎಸ್ ಪಾಟೀಲ್ ಅವರು ಹಾಗೂ ಮಹೇಶ್ ಕೋಣೆಯವರು ಅತಿಥಿಗಳಾಗಿ ಸುರೇಶ ಅಂಜಿಯವರು ಹಾಗೂ ವಿಜಯ್ ಕುಮಾರ್ ಮುಚ್ಚಳಂ ಯವರು ತನ್ಮಯ ಚಿಂತ ಚಿಂತನ ಚಾವಡಿ ಭಾಗವಹಿಸಲಿದ್ದಾರೆ ನಿರೂಪಣೆಯನ್ನು ಎಂ ವೈ ಮೆಣಸಿನಕಾಯಿಯವರು ನಡೆಸಿಕೊಡಲಿದ್ದಾರೆ. ಸಾಹಿತ್ಯಆಸಕ್ತರಿಗೆ ಆಗಮಿಸಲು ವಿನಂತಿ ಮಾಡಿಕೊಳ್ಳಲಾಗಿದೆ.