Homeಸುದ್ದಿಗಳುಬೀದರ; SDPI ನಿಂದ ಪ್ರತಿಭಟನೆ

ಬೀದರ; SDPI ನಿಂದ ಪ್ರತಿಭಟನೆ

ಬೀದರ: 2D ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ  ಹುಮನಬಾದ ನಲ್ಲಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

ಹುಮನಬಾದ ತಹಶೀಲ್ದಾರರ ಕಚೇರಿ ಮುಂದೆ ನಿಂತು ಪ್ರತಿಭಟನೆ ನಡೆಸಿದರು.

ರಾಜ್ಯದ ಮುಖ್ಯ ಮಂತ್ರಿ ಕೋಮು ಗಲಭೆ ಹಚ್ಚುವ ಕೆಲಸ ಮಾಡುತ್ತಾರೆ. ನಾವು ಒಂದೇ ಮಕ್ಕಳ ಹಾಗೆ ಬದುಕಲು ಬಿಡುತ್ತಾ ಇಲ್ಲ. ರಾಜ್ಯವು ಸರ್ವಜನಾಂಗದ ಶಾಂತಿಯ ತೋಟದ ಹಾಗೆ ಇದೆ. ಆದರೆ ನೀವು ಇರಲು ಬಿಡುತ್ತಿಲ್ಲ. ಸಾರ್ವಜನಿಕರ ಮುಂದೆ ಬನ್ನಿ ನಿಮಗೆ ದಮ್ ಇದ್ದರೆ ಈ ಸಲ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸಿ ಎಂದು ಮುಖ್ಯಮಂತ್ರಿಗಳಿಗೆ SDPI ಕಾರ್ಯಕರ್ತರು ಸವಾಲು ಹಾಕಿದರು

2 ಡಿ ಮೀಸಲಾತಿಯನ್ನು ಪುನರ್ ಸ್ಥಾಪಿಸಿ ಎಂದು ಅವರು ಆಗ್ರಹಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group