Bidar: ಬೀದರ: ಧಾರಾಕಾರ ಮಳೆ‌, ಜನ ಜೀವನ‌‌ ಅಸ್ತವ್ಯಸ್ತ

Must Read

ಬೀದರ: ಬೀದರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರೀ ಮಳೆಯಾಗಿ, ನಸುಕಿನ ಜಾವ ಕೂಡ ಮೋಡ ಕವಿದ ವಾತವರಣವಿದ್ದು ಜೋರಾಗಿ ಸುರಿಯುತ್ತಿರುವ ಮಳೆ ಮುಂದುವರೆದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಬೆಳಿಗ್ಗೆ ಯಿಂದ ಸುರಿಯುತ್ತಿರುವ ಮಳೆಗೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಛತ್ರಿ ಹಿಡಿದು ಹೋಗಲು ಹರಸಾಹಸಪಟ್ಟರು. ಮಳೆ‌ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದರಿಂದ ಜನರು ಮಳೆಯಲ್ಲಿ ಸ್ವೆಟರ ಜಾಕೆಟಗಳನ್ನೂ ಧರಿಸಿ ಛತ್ರಿ ಹಿಡಿದುಕೊಂಡು ತಿರುಗುವ ದೃಶ್ಯ ಸರ್ವ ಸಾಮಾನ್ಯವಾಗಿತ್ತು.

    

ಬೀದರ ಜಿಲ್ಲೆಯಾದ್ಯಂತ ಇಂದು ಮತ್ತು ನಾಳೆ ಜೋರಾಗಿ ಮಳೆಯಾಗುವ‌ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿದೆ.

ಬೀದರ ನಗರದ ಪ್ರಮುಖ ಬಡಾವಣೆ ರಾಮಪುರೆ ಬ್ಯಾಂಕ‌ ಕಾಲೋನಿಯ ರಸ್ತೆ ಸಂಪೂರ್ಣ ಜಲಾವೃತವಾಗಿ ನೀರಿನಲ್ಲಿ ವಾಹನ ಸವಾರರ ಸಂಚಾರ ಪರದಾಟ, ಹದಗೆಟ್ಟ ರಸ್ತೆಯಲ್ಲಿ ಜನರ ಸಂಚಾರ ಪರದಾಟ, ನಗರ ಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ತಗ್ಗು ಹಳ್ಳ ಗುಂಡಿಯಲ್ಲಿ ಸಂಚರಿಸುತ್ತಿರುವ ಕಾರ ಆಟೋ ದ್ವಿಚಕ್ರ ವಾಹನ ಸವಾರರು ನಗರ ಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group