ಬೀದರ್ ಜಿಲ್ಲೆಯ ಪೊಲೀಸರ ಭರ್ಜರಿ ಭೇಟೆ ; 592 ಕೆಜಿ ಗಾಂಜಾ ಜಪ್ತಿ

Must Read

ಬೀದರ – ಔರಾದ ತಾಲ್ಲೂಕಿನ ಸಂತಪುರ ಪೊಲೀಸರಿಂದ ಕಳ್ಳರ ಭರ್ಜರಿ ಬೇಟೆ ನಡೆದಿದ್ದು 592 ಕೆಜಿ ಗಾಂಜಾ ಜಪ್ತಿ ಮಾಡಿ ನಾಲ್ವರ ಬಂಧನ ಮಾಡಿದ್ದಾರೆ.

ಹೈದರಾಬಾದ್ ನಿಂದ ಕಮಲ ನಗರ ಕಡೆ ಹೊರಟಿದ್ದ ಟೆಂಪೋದಲ್ಲಿ ಗಾಂಜಾ ಇರುವ ಬಗ್ಗೆ ಖಚಿತ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದ್ದು ಅಕ್ರಮವಾಗಿ ಸಾಗಿಸುತ್ತಿದ್ದ 592 ಗಾಂಜಾ ಜಪ್ತಿ ಮಾಡಿರುವ ಔರಾದ್ ತಾಲ್ಲೂಕಿನ ಸಂತಪುರ ಠಾಣೆ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ಮುಟ್ಟುಗೋಲು ಹಾಕಿಕೊಂಡಿರುವ ಗಾಂಜಾದ ಮೌಲ್ಯ ₹ 59.20 ಲಕ್ಷ ಎಂದು ಅಂದಾಜಿಸಲಾಗಿದೆ.ಬಂಧಿತರನ್ನು ಓಂಕಾರ್ ಹಳೆಂಬೊರೆ ಸಾ ಮುರಾಳ. ಅನಿಲ್ ಕುಮಾರ್ ತಂದೆ ದಶರಥ ಪುಲೆ ಕೊನಮೇಳಕುಂದಾ , ಹಾಜಿಪಾಶಾ ತಂದೆ ರಶೀದ್ ಮಿಯ್ಯಾ ಖುರೇಶಿ ಕಮಲ ನಗರ, ಅಸ್ಲಾಂ ತಂದೆ ಗೌಸೊದ್ದಿನ ಜನ್ನತನಗರ ಭಾಲ್ಕಿ ಬಂಧಿತರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದ್ದು ಈ ವರ್ಷದ ದಾಖಲೆ ಎನಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಿ ಎಲ್ ನಾಗೇಶ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಇಲಾಖೆ ಮೂಲದಿಂದ ಮಾಹಿತಿ ದೊರೆತಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group