ಬಾಗಲಕೋಟೆ: ಬಿಜೆಪಿಯ ಹಿರಿಯ ಮುಖಂಡರು, ಮುತ್ಸದ್ದಿ ರಾಜಕಾರಣಿ, ವಿಧಾನ ಪರಿಷತ ಶಾಸಕರಾದ ಪಿ.ಎಚ್. ಪೂಜಾರ ಅವರಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಇಂದು ಬೆಳಗ್ಗೆ ನಗರದ ಕಿಲ್ಲಾ ಕೊತ್ತಲೇಶ ಮಾರುತಿ, ಅಂಬಾಭವಾನಿ, ಗಣಪತಿ, ಕೇದಾರನಾಥ ಹಾಗೂ ರಾಘವೇಂದ್ರ, ಗ್ರಾಮ ದೇವತೆ, ಮಲ್ಲಿಕಾರ್ಜುನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಿ.ಎಚ್. ಪೂಜಾರ್ ಇವರ ಒಳತಿಗಾಗಿ ಶುಭ ಹಾರೈಸಿ ನಂತರ ಜನ ಸಂಪರ್ಕ ಕಾರ್ಯಾಲಯದಲ್ಲಿ ‘ಕರುಣೆಯ ತುತ್ತು’, ನಿರ್ಗತಿಕರಿಗೆ ಬಟ್ಟೆಗಳನ್ನು ವಿತರಿಸಿ ಅವರ ಜೊತೆ ಸಹ ಭೋಜನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಡಾ. ಶೇಖರ್ ಮಾನೆ, ಸಂಗನಗೌಡ ಗೌಡರ, ಶಂಭುಗೌಡ ಪಾಟೀಲ್, ವಿರುಪಾಕ್ಷ ಅಮೃತ್ಕರ್, ಚಂದ್ರಕಾಂತ್ ಕೇಸ್ನೂರ್, ಮಲ್ಲಯ್ಯ ಪೂಜಾರ, ಮಲ್ಲಿಕಾರ್ಜುನ್ ಸುರಪುರ್, ವಿಶ್ವನಾಥ್ ಪೂಜಾರ್, ಅನಂತ ಮಳಗಿ, ಸಂಜು ಡಿಗ್ಗಿ, ಯಲ್ಲಪ್ಪ ಅಂಬಿಗೇರ್, ರಾಜು ಚಿತ್ತವಾಡಗಿ, ರಾಜು ಗೌಳಿ, ಶೈಲು ಅಂಗಡಿ, ಡಾ. ಕೃಷ್ಣ ಚೌಧರಿ, ಸುದೀರ್ ಜಾಧವ್, ಗಣೇಶ ದುದ್ದಾನಿ, ಮಲ್ಲಪ್ಪ ಕಟಗೇರಿ, ಬಸಪ್ಪ ಪಲ್ಲೆದ, ಶಂಕರ ಮಗಜಿ, ಮಾರುತಿ ಮಗಜಿ, ರಾಜು ಶ್ರೀರಾಮ, ಆಸಗೇಪ್ಪ ತಳವಾರ, ಈರಣ್ಣ ತಂಬಾಕದ, ಮಲ್ಲಪ್ಪ ಯಡಿಗೇರಿ, ಮಲ್ಲಪ್ಪ ಬಡಿಗೇರ, ಮಂಜುನಾಥ ಬಳೂರಗಿ, ಜಗದೇಶ ಪವಾರ್, ವಿನಾಯಕ ದೇಸಾಯಿ, ವಿರುಪಾಕ್ಷ ಬೇನಾಳ, ಮೋಹನ್ ಗೋಣಿ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಮಾರುತಿ ಶೇಟವಾಜಿ, ಸ್ನೇಹಿತರು, ಹಿರಿಯರು ಹಾಗೂ ಅಭಿಮಾನಿಗಳು ಇದ್ದರು