ಮೂಡಲಗಿ: ಆರ್ ಸಿಬಿ ಘಟನೆಯಲ್ಲಿ ಅಮಾಯಕ ೧೧ ಜನರ ಸಾವಿಗೆ ಕಾರಣವಾದ, ಕಾಂಗ್ರೆಸ್ ಆಡಳಿತ ಇರುವ ರಾಜ್ಯ ಸರ್ಕಾರ ರಾಜೀನಾಮೆ ಕೊಡಬೇಕೆಂದು ಅರಭಾವಿ ಮಂಡಲ ಬಿಜೆಪಿ ಕಾರ್ಯಕರ್ತರು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಕಾರ್ಯದರ್ಶಿ ಮಹಾಂತೇಶ ಕುಡಚಿ, ಅನ್ವರ ನದಾಫ್, ಪಾಂಡು ಮಹೇಂದ್ರಕರ, ಕೇದಾರಿ ಭಸ್ಮೆ, ಜಗದೀಶ ತೇಲಿ, ಹಣಮಂತ ಗುಡ್ಲಮನಿ, ಸಚಿನ ಹೊಸಕೋಟೆ, ಇಮಾಮಸಾಬ ಶೇಖ, ರವಿ ನೇಸೂರ ಇನ್ನು ಅನೇಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.