Homeಸುದ್ದಿಗಳುರಾಜ್ಯ ಸರ್ಕಾರದಲ್ಲಿ ಹುಲಿಗಳ ಮಾರಣಹೋಮ - ಬಿಜೆಪಿ ಟ್ರೋಲ್

ರಾಜ್ಯ ಸರ್ಕಾರದಲ್ಲಿ ಹುಲಿಗಳ ಮಾರಣಹೋಮ – ಬಿಜೆಪಿ ಟ್ರೋಲ್

spot_img

ಬೀದರ – ಮಲೆಮಹದೇಶ್ವರ ಅರಣ್ಯದಲ್ಲಿ 5 ಹುಲಿಗಳ ದಾರುಣ ಹತ್ಯೆಯ ರಕ್ತದ ಕಲೆ ಇನ್ನೂ ಮಾಸುವ ಮುನ್ನವೇ ಮತ್ತೊಂದು ಹುಲಿಯನ್ನು ಕ್ರೂರವಾಗಿ ಕೊಂದು ಎಸೆದಿರುವ ಘಟನೆ ಜರುಗಿದೆಯೆಂದು ಭಾರತೀಯ ಜನತಾ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದೆ.

ಒಂದೆಡೆ ನಾಡಿನಲ್ಲಿ ಹಸುಗಳ ಕೆಚ್ಚಲಿಗೆ ಬ್ಲೇಡ್ ಹಾಕುವ ಹೀನಕೃತ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಡಿನಲ್ಲಿ ಹುಲಿಗಳ ಮಾರಣಹೋಮವೇ ನಡೆಯುತ್ತಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ, ನಿಮ್ಮ ನಿರ್ಲಕ್ಷ್ಯದಿಂದ ಇನ್ನು ಎಷ್ಟು ಹುಲಿಗಳು ಬಲಿಯಾಗಬೇಕು? ಎಂದು ಸಾಮಾಜಿಕ ಜಾಲತಾಣದಲ್ಲಿ ಆಡಳಿತಾರೂಢ ಪಕ್ಷವನ್ನು ಲೇವಡಿ ಮಾಡಲಾಗಿದೆ.
ಬ್ರೇಕಿಂಗ್..

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದ ನಾಯಕರು ವಾಗ್ದಾಳಿ..

ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು..
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕೊಲೆಗಾರರು ಕಾನೂನಿನ ಭಯವಿಲ್ಲದೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಹುಲಿಗಳ ಮಾರಣ ಹೋಮ ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಈಶ್ವರ ಖಂಡ್ರೆ ಫೋಟೋ ಟ್ರೋಲ್ ಮಾಡಿ ಬಿಜೆಪಿ ನಾಯಕರು ಫೊಸ್ಟ್ ಮಾಡಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group