ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಮ್ಸ್ ಆಸ್ಪತ್ರೆಯ ರಕ್ತಭಂಡಾರದ ಸಿಬ್ಬಂದಿಗಳು ಬುಧವಾರ ದಿ. ೨೦ ರಂದು ಆಯ್.ಟಿ.ಬಿ.ಪಿ ೪೪ ಬೆಟಾಲಿಯನ್ ಹಾಲಭಾಂವಿ ಕ್ಯಾಂಪ ವಂಟಮೂರಿಗೆ ಭೇಟಿ ನೀಡಿ ೨೪ ಜನರಿಂದ ರಕ್ತದಾನ ಮಾಡಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಶಿಬಿರದಲ್ಲಿ ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಆರ್.ಜಿ. ಪಾಟೀಲ, ಡಾ. ಸ್ನೇಹಾ, ೪೪ ಬೆಟಾಲಿಯನ್ ಕಮಾಡೆಂಟ್ ಡಾ. ಅನೀಲಕುಮಾರ ಅಥರ್ನಿಯಾ, ಸೆಕೆಂಡ್ ಕಮಾಡೆಂಟ್ ಮನೀಷ ಭಾಟಿಯಾ, ಡಾ.ಮೋಹಿತ ಶರ್ಮಾ, ರಾಜಬೀರಸಿಂಹ ರಾಥೋರ, ಸಮಾಜ ಸೇವಕ ವಿನೋದ ಜಗಜಂಪಿ, ಕ್ಯಾಂಪಿನ ಸುಬೇದಾರ ಹಾಗೂ ಇನ್ನಿತರ ಮೆಡಿಕಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.