- Advertisement -
ಸಿಂದಗಿ – ಕೇಂದ್ರ ಸರ್ಕಾರ ಮಂಡಿಸಿದ ಈ ಬಾರಿಯ ಬಜೆಟ್ ಕೇವಲ ಉದ್ಯಮದಾರರಿಗೆ ಸೀಮಿತವಾದಂತಿದೆ.
ರಾಜ್ಯದ ಜನ ನಿರೀಕ್ಷೆಗೆ ತಕ್ಕಂತೆ ಯಾವ ಬಹುದೊಡ್ಡ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಕಂಡಿಲ್ಲ ಹೀಗಾಗಿ ರಾಜ್ಯದ ನಿರೀಕ್ಷೆಗೆ ಈ ಬಜೆಟ್ ಶೂನ್ಯವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಟೀಕಿಸಿದರು.
ಮಧ್ಯಮ ವರ್ಗದ ಜನತೆಗೆ ಮತ್ತು ಮಹಿಳೆಯರಿಗೆ ಯಾವುದೇ ರೀತಿಯ ಅನುಕೂಲವಾಗುವಂಥ ಯೋಜನೆಗಳು ಇಲ್ಲ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತ ಯೋಜನೆ, ರೈತರನ್ನ ಅಭಿವೃದ್ಧಿಪಡಿಸುವ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಇರದೇ ಇರುವುದರಿಂದ ಇದು ಒಂದು ರೀತಿಯ ರೈತ ವಿರೋಧಿ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿಗೆ ಸಿಗಬೇಕಾಗಿರುವ ಅನುದಾನ ಯೋಗ್ಯವಾಗಿ ಸಿಗದೇ ಇರುವುದು ಅಸಮಾಧಾನವಾಗಿದೆ ಎಂದು ಅವರು ತಿಳಿಸಿದರು