ಕುರುಹಿನಶೆಟ್ಟಿ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ

Must Read

ಕಾಮಾಕ್ಷಿಪಾಳ್ಯ ಬೆಂಗಳೂರು ನೇಕಾರ ಕುರುಹಿನಶೆಟ್ಟಿ ಸಮಾಜ ಸಂಘ ರಿ ಇವರಿಂದ 2023ನೇ ಸಾಲಿನ ನೂತನ ವರ್ಷದ ತೂಗು ಪಂಚಾಂಗವನ್ನು ( ಕ್ಯಾಲೆಂಡರ್ ) ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನೇಕಾರ ಕುರುಹಿನಶೆಟ್ಟಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುವ ಕಾರ್ಯಕ್ರಮವನ್ನು ಕುಲದೈವ ಶ್ರೀ ನೀಲಕಂಠೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷರಾದ ಗಟ್ಟಿ ಗುರುಮೂರ್ತಿ, ಕಾರ್ಯದರ್ಶಿಗಳಾದ  ಬಂಗಿ ರಮೇಶ್, ಉಪಾಧ್ಯಕ್ಷರಾದ  ಮುದಗಲ್ ಸಿದ್ದಪ್ಪ,  ಖಜಾಂಚಿಗಳಾದ ಮಾದಗುಂಡಿ ಶ್ರೀನಿವಾಸ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ರೂಪಾ ಲಿಂಗೇಶ್ವರ್, ಲಿಂಗೇಶ್ವರ್, ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.


ಮಲ್ಲಿಕಾರ್ಜುನ ಪೋಲಕಲ್
ಗಂಗಾವತಿ

Latest News

ಪಾಪನಾಶ ದೇವಾಲಯ ಪ್ರಕರಣ ; ಏಕವಚನದಲ್ಲಿ ಖಂಡ್ರೆ ನಿಂದಿಸಿದ ಖೂಬಾ

ಬೀದರ - ನಗರದ ಪಾಪನಾಶ ದೇವಾಲಯದಲ್ಲಿ ಮಹಾಪೂಜೆ ಕುರಿತಂತೆ ಕೈ ಕಮಲ ಜಟಾಪಟಿಯು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದ್ದು ತಮಗೆ ಶಿವನ ದರ್ಶನಕ್ಕೆ ಅವಕಾಶ ಕೊಡಲಿಲ್ಲವೆಂದು...

More Articles Like This

error: Content is protected !!
Join WhatsApp Group