ಸಿಂದಗಿ: ಬ್ಲಾಕ್ ಕಾಂಗ್ರೆಸ ಸಮಿತಿ ಕಾರ್ಯಾಲಯದಲ್ಲಿ ಮೇಕೆದಾಟು ಪಾದಯಾತ್ರೆ ಮತ್ತು ಸದಸ್ಯತ್ವ ಅಭಿಯಾನ ನಿಮಿತ್ತ ಪೂರ್ವಭಾವಿ ಸಭೆ ಹಾಗೂ ಆಲಮೇಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಆಯ್ಕೆಯಾದ ನೂತನ ಚುನಾಯಿತ ಸದಸ್ಯರಿಗೆ ಸನ್ಮಾನ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ರವರು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು ಜ.09 ರಿಂದ 19ರ ವರೆಗೆ ಹಮ್ಮಿಕೊಂಡ ಮೇಕೆದಾಟು ಪಾದಯಾತ್ರೆಯ ಉದ್ದೇಶ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಸಂಗ್ರಹಿಸಿ ಸುತ್ತಮುತ್ತಲಿರುವ ನಗರಗಳಿಗೆ ಕುಡಿಯುವದಕ್ಕಾಗಿ, ಆ ಪ್ರದೇಶ ರೈತರ ಅನೂಕೂಲಕ್ಕಾಗಿ ಮತ್ತು ವಿದ್ಯುತ್ ಉತ್ಪಾದಿಸಲು ನಮ್ಮ ನೀರು ನಮ್ಮ ಹಕ್ಕು ಉದ್ದೇಶದಂತೆ ಮೇಕೆದಾಟು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಕೆಪಿಸಿಸಿ ಆದೇಶದಂತೆ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿಂದಗಿ ವಿಧಾನಸಭಾ ಮತಕ್ಷೇತ್ರದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡರು.
ಜ. 19 ರಂದು ಕೆಪಿಸಿಸಿ ಆದೇಶದಂತೆ ಬೆಂಗಳೂರಿನ ಬಸವನಗುಡಿ ಆವರಣದಲ್ಲಿ ಪಾದಯಾತ್ರೆ ಮುಕ್ತಾಯವಾಗುತ್ತದೆ. ಈ ಮುಕ್ತಾಯ ಸಮಾರಂಭ ಕಾರ್ಯಕ್ರಮಕ್ಕೆ 500 ಜನರು ಭಾಗವಹಿಸುತ್ತಾರೆಂದು ತಿಳಿಸಿದರು..
ಈ ಸಂದರ್ಭದಲ್ಲಿ ಆಲಮೇಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ನೂತನ ಚುನಾಯಿತ ಪಕ್ಷದ ಸದಸ್ಯರಿಗೆ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಶ್ರೀ ಹದನೂರ, ಆಲಮೇಲ ಬ್ಲಾಕ ಕಾಂಗ್ರೆಸ ಸಮಿತಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾಗಿ ನೇಮಕವಾದ ಅಬ್ಬಾಸಲಿ ಕಮಲಾಪೂರ, ಉಪಾಧ್ಯಕ್ಷರಾದ ಮಹ್ಮದಮೊಸಿನ ಗಾಲಿಬವಾಲೆ ಎಲ್ಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮುಸ್ತಾಕ ಮುಲ್ಲಾ, ಆಲಮೇಲ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ಅಯುಬ ದೇವರಮನಿ, ಯೋಗಪ್ಪಗೌಡ ಪಾಟೀಲ, ಮಹಿಳಾ ಸಮಿತಿ ಅಧ್ಯಕ್ಷೆ ಶಾರದಾ ಬೆಟಗೇರಿ, ಶಿವನಗೌಡ ಬಿರಾದಾರ, ಭೀಮರಾಯ ಅಮರಗೋಳ, ರಾಜು ಕೂಚಬಾಳ, ಕೆಂಚಪ್ಪ ಕತ್ನಳ್ಳಿ, ಭೀಮು ವಾಲಿಕಾರ, ಯುವ ಕಾಂಗ್ರೆಸ ಅಧ್ಯಕ್ಷ ಇರ್ಪಾನ ಆಳಂದ, ಜಿಲ್ಲಾ ಕಾಂಗ್ರೆಸ ಸಮಿತಿ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಬಿಜಾಪೂರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇರ್ಪಾನ ಮುಲ್ಲಾ, ಯಲ್ಲು ಕೆರಕಿ, ರಮೇಶ ಗುಬ್ಬೆವಾಡ, ಕುಮಾರ ಗೊಂದಳಿ, ಮಾಂತೇಶ ಅಮ್ಮಾಗೊಳ, ಅಮೀತ ಚವ್ಹಾಣ, ದೇವಿಂದ್ರ ಪೂಜಾರಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.