ಕವನ

ಕವನ : ದೈವಿಕ ಶಿಕ್ಷಕರು

ದೈವಿಕ ಶಿಕ್ಷಕರು ಇವರು ದೈಹಿಕ ಶಿಕ್ಷಣ ಶಿಕ್ಷಕರಲ್ಲ ಇವರು ದೈವಿಕ ಶಿಕ್ಷಕರು ಇವರು ಜೀವನ ಕೌಶಲ ಕಲಿಸುವ ಜೀವನದ ಶಿಕ್ಷಕರು ||ಪ||ನಾಲ್ಕು ಗೋಡೆಯ ಪಾಠಕೆ ಸೀಮಿತವಲ್ಲ ಈ ಕಲಿಕೆ ಆಟದ ಮೈದಾನದಿ ಮೂಡಿಸುವರು ಬದುಕಿನ ನಂಬಿಕೆ ಸೋಲು-ಗೆಲುವಿನ ಲೆಕ್ಕಾಚಾರವ ಸಮವಾಗಿ ತೂಗುವರು ದೈಹಿಕ ಶಿಕ್ಷಣ ಶಿಕ್ಷಕರು, ಬಲಿಷ್ಠ ಸಮಾಜವ ಕಟ್ಟುವರು ||೧||ಯೋಗ, ವ್ಯಾಯಾಮ, ನೃತ್ಯಗಳ ಇಂಪಾದ ಸಂಗಮ ಸಂತುಲಿತ ಆಹಾರ, ಶಿಸ್ತುಬದ್ಧ ಜೀವನದ...

ಕವನ : ಗಾಂಧಿನೇಕೆ ಕೊಂದರು ?

ಗಾಂಧಿನೇಕೆ ಕೊಂದರು ?ಸತ್ಯ ಶಾಂತಿ ನ್ಯಾಯ ಮೂರ್ತಿ ಗಾಂಧಿನೇಕೆ ಕೊಂದರು ? ಎಷ್ಟೋ ವರುಷಗಳ ಹಿಂದೆ ನನ್ನ ಮುಗ್ಧ ಮಗನ ಪ್ರಶ್ನೆಯು ದಶಕ ಕಳೆಯಿತು ಉತ್ತರ ಹುಡುಕಲು ಕೊನೆಗೂ ಸಿಕ್ಕಿತು ಕಾರಣ ಬಿಚ್ಚಿ ಹೇಳಿದೆ ನನ್ನ ಮಗನಿಗೆ ನಿಜದ ನಿಲುವಿನ ಹೂರಣ ಬಾಪು ಸರಳ ಸಮತೆ ಪ್ರಿಯ ಕೈಗೆ ಕೊಟ್ಟನು ಸ್ವಾತಂತ್ರ ದಾಸ್ಯ ತೊಲಗಿಸಿ ದೇಸಿ ಚರಕ ನೂಲು ನೂತನು ಭಾರತ ಸುಳ್ಳು ಎಂದೂ ಹೇಳಲಿಲ್ಲ ಕೋಮು ಗಲಭೆ ಮಾಡಲಿಲ್ಲ ಜಾತಿ ಧರ್ಮದ ದ್ವೇಷ...

ಎರಡು ಕವನಗಳು : ಶ್ಯಾಮಲಾ ಪಾಟೀಲ

ರೈತ ಯೋಗಿ ಕಷ್ಟಪಟ್ಟು ದುಡಿಯುವ. ಬೆಟ್ಟದಷ್ಟು ಕಷ್ಟ ಸಹಿಸುವ. ಭೂತಾಯಿ ನಂಬಿ ಹೊಲದಿ. ತಾನೇ ದುಡಿಯುವ ಅನ್ನದಾತ ನಮ್ಮ ರೈತ ನಮ್ಮ ರೈತನಾಡ ಜನರು ಬದುಕಲೆಂದು . ಹಗಲು ರಾತ್ರಿ ಹೊಟ್ಟೆಗಾಗಿ ಕಾಳುಕಡಿ ಬೆಳೆಯುವ ರೈತಯೋಗಿ ನಮ್ಮ ರೈತ ನಮ್ಮ ರೈತಗುಡುಗು ಮಳೆ ಮಿಂಚು . ಲೆಕ್ಕಿಸದೆ ಭೂಮಿ ಅಂಚಿನಲ್ಲಿ. ಸಂಚು ಮಾಡದೆ ದುಡಿಯುವ. ನಮ್ಮ ರೈತ ನಮ್ಮ ರೈತಮಳೆಯ ಗುಡುಗು. ಚಳಿಯ ನಡುಗು. ನೋವ ನುಂಗಿ ನಲಿವ. ನಮ್ಮ ರೈತ ನಮ್ಮ...

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ ತಲ್ಲಣಕೆ ಮುನಿಸದೆ ಕಟ್ಟಿ ಬಿಡು ಹೃದಯಕ್ಕೆ ಸೇತುವೆ ________________________*ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ*

ಕವನ : ನೆಲದ ನಾಲಿಗೆ ಮೇಲೆ

ನೆಲದ ನಾಲಿಗೆ ಮೇಲೆ​ಆ ಗುಡಿಸಲೊಳಗೆ ಬರೀ ಬಿಕ್ಕಳಿಕೆಗಳೆ ಸುಕ್ಕುಗಟ್ಟಿವೆ, ನೆತ್ತರು ಮೆತ್ತಿದ ಪ್ರಶ್ನೆಗಳು- ಇನ್ನೂ ಉಸಿರಿಡಿದಿವೆ. ​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ ತೊಟ್ಟಿಕ್ಕುತ್ತಿವೆ; ಹಾಲಾಹಲದ ನಂಜುಂಡು, ಬಡಿವಾರದಲಿ ಗರ ಬಡಿದಂತೆ ಹಾಸಿದೆ ಬೆಳಕು. ​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು, ಬಾಳು ಸಜೆ ಹಡೆದು; ಎಂದೋ ಶವ ಸುಟ್ಟಂತಾಗಿದೆ ಒಲೆಯ ಬೂದಿ.​ಈ ಅರಮನೆಯೊಳಗೆ ಮುಗ್ಧರ ರಕ್ತದಲಿ ಮುಖ ತೊಳೆದು, ಅಮೃತದ ಮಳೆ ಸುರಿದು ಕಾಮನೆಯ ಫಸಲು ನಿಡುಸುಯಿದು... ​ಆ ಗುಡಿಸಲೊಳಗೆ ಹೊಟ್ಟೆಯ ಬಟ್ಟಲು ತುಂಬ ಹಸಿವಿನ ಚಿತೆಯ ಬಿಂಬ; ನೇಗಿಲ ತುಟಿ ತಾಗಿದರೂ ಈ...

ಕವನ : ನೆನಪಾಗುತ್ತಾರೆ

ನೆನಪಾಗುತ್ತಾರೆ ಗೆಳೆಯರೆ ಸತ್ಯ ಶುದ್ಧತೆಗೆ ಇಲ್ಲ ಬೆಲೆ ಗೌರವ ಉಪ್ಪಿನಲ್ಲಿ ಕಾಣದ ಇರುವೆಗಳು ಸಕ್ಕರೆಯಲ್ಲಿ ಮುಕ್ಕುತ್ತವೆ. ಹಾಲು ಮಾರುವವನು ಓಣಿ ಕೇರಿ ತಿರುಗಬೇಕು ಹಾಲು ಕೊಳ್ಳುವವರು ಕೇಳುತ್ತಾರೆ ನೀರೆಷ್ಟು ಬೆರೆಸಿದೆಯೆಂದು ಆಲ್ಕೊಹಾಲ್ ಮಾರುವವನ ಅಂಗಡಿಯಲ್ಲಿ ಜನ ಜಂಗುಳಿ ಅವರೆ ಸಾರಾಯಿಯಲ್ಲಿ ನೀರು ಸೋಡಾ ಬೆರೆಸಿ ಸಂಭ್ರಮಿಸುತ್ತಾರೆ ಮನುಷ್ಯನಿಗೆ ಪಶುವೆಂದರೆ ಎಲ್ಲಿಲ್ಲದ ಕೋಪ ಸಿಂಹ ಹುಲಿಯೆಂದರೆ ಹಿಗ್ಗಿ ಕುಣಿಯುತ್ತಾನೆ. ಪಾಪ ಅವನಿಗೆ ಗೊತ್ತಿಲ್ಲ ಅವುಗಳು ಪಶುವೆಂದು ತಿಳಿ ನೀರಿನಲ್ಲಿ ಎಂದೂ ಮೀನು ವಾಸಿಸುವುದಿಲ್ಲ ಕೊಳಚೆಯಲ್ಲಿ ಅವುಗಳ ಸಂತೆ ಸತ್ಯ ಹೇಳುವವನಿಂದು ಒಂಟಿಯಾಗುತ್ತಿದ್ದಾನೆ ಸುಳ್ಳಿಗೆ ಸನ್ಮಾನದ ಪಟ್ಟ ನೆನಪಾಗುತ್ತಾರೆ ಬುದ್ಧ ಬಸವ ಬಾಪು ಸತ್ಯ ಹೇಳಿ ಬಿಟ್ಟು ಹೋದರು ಜಗವ ________________________ಡಾ.ಶಶಿಕಾಂತ ಪಟ್ಟಣ ರಾಮದುರ್ಗ...

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ ಇರುಳಿಗೆ ಶ್ರೇಷ್ಠ ಶಿಲ್ಪಿ ಅಂಬೇಡ್ಕರ ಚಿಂತನೆಗಳ ಸಿರಿದೀಪವು ಶತಮಾನಗಳ ದಾಸ್ಯದ ಕತ್ತಲೆಯ ಅಳಿಸಿ ದಿವ್ಯ ಚೇತನದ ಮೌಲ್ಯ ಬೆಳೆಸಿ ಭವ್ಯ ಭಾರತಕಿದುವೆ ಭದ್ರ ಬುನಾದಿ ನಮ್ಮ ಸಂವಿಧಾನ,ನಮಗೆ ಸುವಿಧಾನಪವಿತ್ರ ಪದಪುಟಗಳ ಸ್ವೀಕಾರ 1949 ರಂದು ಜಾರಿಯಾಯಿತಿದು ಕೈ ಬರಹದೊಂದಿಗೆ 1950 26...

ಎರಡು ಕವನಗಳು : ಡಾ.ಶಶಿಕಾಂತ ಪಟ್ಟಣ

ಯಾರಿದ್ದರೂ ಇಲ್ಲದಿದ್ದರೂ _____________________ ಯಾರಿದ್ದರೂ ಇಲ್ಲದಿದ್ದರೂ ಬದುಕು ನಡೆಯುತ್ತಲೇ ಇರುತ್ತದೆ. ಕಾಲುಗಳು ಹೆಜ್ಜೆ ಹಾಕುತ್ತವೆ. ಒಮ್ಮೊಮ್ಮೆ ನಮ್ಮಿಚ್ಚೆ ಕಡೆಗೆ ಕೆಲವೊಮ್ಮೆ ಗೊತ್ತಿರದ ದಾರಿಗೆ ಹೀಗೆ ಸಾಗುತ್ತಲೇ ಇರುತ್ತವೆ. ಮುಂಜಾನೆ ಸುಡು ಬಿಸಿಲು ಸಂಜೆ ತಂಪು ಗಾಳಿ ರಾತ್ರಿಯ ಇರುಳು ಕನಸು. ಎಷ್ಟು ಪ್ರತಿರೋಧ ಬಂದರೂ ನಿಲ್ಲದ ಪಾದಗಳು ಮನದೊಡೆಯನ ಆಯ್ಕೆ ಸರಿಯೋ ತಪ್ಪೋ? ಗೊತ್ತಿರದ ಕಾಲುಗಳು ಕಾಲದ ಚಕ್ರದಲ್ಲಿ ಹೀಗೆ ಸಾಗುತ್ತಲೇ ಇರುತ್ತವೆ. ಯಾರಿದ್ದರೂ ಇಲ್ಲದಿದ್ದರೂ ________________________ ಹೇಳಲಾಗದ ಮಾತುಗಳು _________________________ ನಿನ್ನ ನೋಡ ಬೇಕೆನ್ನುವ ತವಕ ಆತುರ ಬಯಕೆ ತಡಪಡಿಸುವ ಧ್ವನಿ ಮಾತು ಕಡಿಮೆ ಭಾವಗಳು ಉಳುಕುತ್ತಿವೆ ಹತ್ತಿರ ಇದ್ದರೂ ಹೇಳಲಾಗದ ಪ್ರೀತಿ ಕಣ್ಣುಗಳಲ್ಲಿ ಅರಳಿ ನಿಂತಿವೆ ಕನಸುಗಳು ನೀನೂರಿದ...

ಎರಡು ಕವನಗಳು : ಶ್ರೀಮತಿ ಶಾಮಲಾ ಪಾಟೀಲ

ಹಬ್ಬ ಹಬ್ಬ ಮಕ್ಕಳ ಹಬ್ಬಕಲಿಕಾ ಹಬ್ಬ ಮಕ್ಕಳ ಹಬ್ಬ ಆಡಿ ನಲಿವ ಹಬ್ಬ ನೋಡಿ ಕಲಿವ ಹಬ್ಬ ಮಾಡಿ ತಿಳಿವ ಹಬ್ಬಮಕ್ಕಳ ನಗುವಿನ ಹಬ್ಬ . ಸುಂದರ ಹಬ್ಬ ಕನ್ನಡ ಹಬ್ಬ ಚೆಲುವಿನ ಹಬ್ಬ ಒಗ್ಗಟ್ಟಿನ ಹಬ್ಬ ಗೆಳೆಯರ ಸುಂದರ ನಂದನ ಹಬ್ಬ..!ಕಲಿಕೆಗೆ ಚೇತನ ಕೊಡುವ ಹಬ್ಬ.ಮಕ್ಕಳ ಅಭಿವ್ಯಕ್ತಿಯ ಪ್ರೇರೇಪಿಸುವ ಹಬ್ಬ .ಮಕ್ಕಳ ಕಲೆಯ ಉತ್ತೇಜಿಸುವ ಹಬ್ಬ ಹರಟೆ,ಮೋಜು, ಕುಣಿತದ ಹಬ್ಬ...!ಮಕ್ಕಳ...

ಕವನ : ರೆಕ್ಕೆಗಳಿವೆ

ರೆಕ್ಕೆಗಳಿವೆನೀನು ಮೇಲೆ ಹಾರಲು ಯಾರ ಅನುಮತಿ ಕೇಳಬೇಕಿಲ್ಲ ಗುಡುಗು ಸಿಡಿಲು ಮಳೆ ಗಾಳಿ ಬಿಸಿಲು ಚಳಿ ಕಷ್ಟ ಸಂಕಟ ನೋವು ಹಸಿವು ವೇದನೆ ಯಾತನೆ ಅಳುಕು ಅಂಜಿಕೆ ಏಕೆ? ನಿನಗೆ ನಿನ್ನ ಕನಸಿನ ರೆಕ್ಕೆಗಳಿವೆ ಹಾರಿ ಬಿಡು ಆಗಸಕೆ ನಿನ್ನ ಗುರಿ ಮುಟ್ಟುವ ತನಕ ನಿಲ್ಲದಿರು ಮುಗಿಲು ಯಾರ ಸೊತ್ತಲ್ಲ ನಿನ್ನ ರೆಕ್ಕೆಯ ಶಕ್ತಿಯಲಿ ನಿನಗೆ ನಂಬಿಕೆಯಿರಲಿ ________________________ಡಾ.ಶಶಿಕಾಂತ ಪಟ್ಟಣ ರಾಮದುರ್ಗ
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group