ಬೆಳಗಾವಿ 16: ಬಿ.ಎ. ಸನದಿ ಅವರ ಒಡನಾಡಿಗರಾಗಿದ್ದ ಕನ್ನಡದ ಹಿರಿಯ ಕವಿ, ಭಾವಜೀವಿ, ಡಾ. ನಾಡೋಜ ಚನ್ನವೀರ ಕಣವಿ ಅವರ ನಿಧನದಿಂದ ಕನ್ನಡ ಸಾರಸತ್ವ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಡಾ. ರಾಮಕೃಷ್ಣ ಮರಾಠೆ ಅವರು ನುಡಿದರು.
ಅವರು ಇಲ್ಲಿಯ ಬಿ. ಎ. ಸನದಿ. ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. ಎಂ.ವೈ. ಮೆಣಸಿನಕಾಯಿ, ಸಿ.ಎಂ. ಬೂದಿಹಾಳ, ರಾಯಣಗೌಡ ಪಾಟೀಲ, ಪ್ರೊ. ಬಿ.ಎಫ್. ಕಲ್ಲಣ್ಣವರ ಮುಂತಾದವರು ಸಮನ್ವಯ ಕವಿ ಚನ್ನವೀರ ಕಣವಿ ಕುರಿತು ಮಾತನಾಡಿದರು.