ಸಿಂದಗಿ: ಕ್ರಿಯಾಶೀಲ ರಾಜ್ಯಾಧ್ಯಕ್ಷರಾಗಿರುವ ಸಿ ಎಸ್ ಷಡಕ್ಷರಿ ಇವರ ಆದೇಶದ ಮೇರೆಗೆ ಎನ್ ಪಿ ಎಸ್ ರದ್ದತಿ, ಏಳನೇ ವೇತನ ಆಯೋಗದ ತುರ್ತು ಜಾರಿ, ಉಚಿತ ಆರೋಗ್ಯ ಚಿಕಿತ್ಸಾ ಯೋಜನೆಯ ಜಾರಿಯ ಕುರಿತಂತೆ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರಿಗೆ ಜ. 21ರಂದು ಬೆಳಿಗ್ಗೆ 10-00 ಗ0ಟೆಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕಾರಣ ಸಿಂದಗಿ, ಅಲಮೇಲ್, ಹಾಗೂ ದೇವರ ಹಿಪ್ಪರಗಿ ಮೂರು ತಾಲೂಕಿನ ಪದಾಧಿಕಾರಿಗಳು ಆಗಮಿಸುವಂತೆ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಅಶೋಕ .ಎಸ್. ತೆಲ್ಲೂರ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕೂಡಾ ಇದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ ಸುರೇಶ್ ಶೇಡಷ್ಯಾಳ ಹಾಗೂ ಸಮಸ್ತ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು, ಸಿಂದಗಿ, ಅಲಮೇಲ್, ಹಾಗೂ ದೇವರ ಹಿಪ್ಪರಗಿ ಮೂರು ತಾಲೂಕಿನ ತಾಲೂಕ ದಂಡಾಧಿಕಾರಿಗಳು ಭಾಗವಹಿಸುವರು ಕಾರಣ ನಮ್ಮ ನಿಮ್ಮೆಲ್ಲರ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬೇಕೆಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.