ಬೆಳಗಾವಿ – ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಸವದತ್ತಿ ಘಟಕಗಳ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಬಸವಲಿಂಗಯ್ಯ ಹಿರೇಮಠ ಮತ್ತು ಬಂಡಾಯ ಕವಿ ಚಂದ್ರಶೇಖರ ಪಾಟೀಲರ ಅಗಲಿಕೆಯ ಶೃದ್ಧಾಂಜಲಿ ಸಭೆ ನೆರವೇರಿತು.
ಕ.ಸಾ.ಪ ಘಟಕದ ಅಧ್ಯಕ್ಷರಾದ ದೊಡಗೌಡರ, ಚು ಸಾಪ.ಘಟಕದ ಅಧ್ಯಕ್ಷರಾದ ಕರಮಲ್ಲಪ್ಪ, ಹಿರಿಯರಾದ ಬಿ.ವಿ.ಬಿ.ನರಗಂದ ಸರ್ , ಬಿ.ಎನ್ ಹೊಸೂರ, ಸರ್, ಆರ್ ಎಂ.ನಿಡವಣಿ ವಕೀಲರು, ಜಾಲಿಕೊಪ್ಪ ವಕೀಲರು ಮತ್ತು ಪೂಜಾರ ಸರ್, ಕುಮಾರ ನರಗುಂದ ಅವರು ಉಪಸ್ಥಿತರಿದ್ದರು.
ರಾಮದುರ್ಗ – ರಾಮದುರ್ಗದ ಸರಕಾರಿ ನೌಕರರ ಭವನದಲ್ಲಿ ಕೂಡ ಸಂತಾಪ ಸಭೆ ನಡೆಯಿತು.
ಕಸಾಪ ನಿಕಟಪೂರ್ವ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಮಾಜಿ ಅಧ್ಯಕ್ಷ ಪ್ರೊ.ಎಸ್.ಎಂ.ಸಕ್ರಿ, ಡಾ.ಪ್ರಕಾಶ ತೆಗ್ಗಿಹಳ್ಳಿ ನುಡಿನಮನ ಸಲ್ಲಿಸಿದರು.
ಪ್ರಧಾನ ಗುರುಗಳಾದ ಕೆ.ಎನ್.ಯಡ್ರಾವಿ, ಕೆ.ವಾಯ್.ಗದಿಗೆನ್ನವರ, ಹನಮಂತ ವಂಟಗೋಡಿ, ನೌಕರ ಸಂಘದ ನಿರ್ದೇಶಕ ಸುರೇಶ ಹುಚ್ಚನ್ನವರ, ಸಿ.ಆರ್.ಪಿಗಳಾದ ಆರ್.ಎನ್.ಮೂಲಿಮನಿ,ಬಿ.ಯು.ಬೈರಕದಾರ, ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ.ಪಾಟೀಲ ಶಿಕ್ಷಕರಾದ ಎ.ವಿ.ಪಾಟೀಲ, ಎಚ್.ಎನ್.ಯಡ್ರಾವಿ, ಎನ್.ಎನ್.ಮೂಗನೂರ, ಬಿ.ಎಂ.ಪಲ್ಲೇದ ಭಾಗಿಯಾಗಿದ್ದರು.