Homeಸುದ್ದಿಗಳುಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚನೆ

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚನೆ

ಸಿಂದಗಿ: ತಾಲೂಕಿನ ಮೊರಟಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಉಪ ಚುನಾವಣಾ ಅಭ್ಯರ್ಥಿಯಾದ ಅಶೋಕ ಮನಗೂಳಿ ಯವರ ಪ್ರಚಾರಾರ್ಥ ಸಭೆ ನಡೆಯಿತು

ವಿಜಯಪುರ ಜಿಲ್ಲೆಯ ಮಾಜಿ ಸಚಿವರು ಹಾಗು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸರಾದ ಡಾ!! ಎಂ ಬಿ ಪಾಟೀಲ್ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದು ಸಂಪೂರ್ಣ ವಾಗಿ ಜನ ವಿರೋಧಿ ಯೋಜನೆಗಳನ್ನು ತರುವ ಮುಖಾಂತರ ರೈತರು ಹಾಗೂ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಡೀಜೆಲ್, ಪೆಟ್ರೋಲ್, ಗ್ಯಾಸ್ ಬೆಲೆಗಳನ್ನು ಗಗನದ ಎತ್ತರಕ್ಕೆ ಏರಿಸಿದ್ದಾರೆ. ಅಂಬಾನಿ ಮತ್ತು ಅದಾನಿ ಇವರಿಬ್ಬರ ಹಿತವನ್ನು ಕಾಪಾಡುವುದೇ ಬಿಜೆಪಿ ಸರ್ಕಾರದ ಸಾದನೆಯಾಗಿದೆ ಎಂದರು.

ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ 168 ಪ್ರಣಾಳಿಕೆ ಯನ್ನು ಇಟ್ಟುಕೊಂಡು ಸರ್ಕಾರವನ್ನು ಅಧಿಕಾರಕ್ಕೆ ತಂದ ಕೇಲವೇ ದಿನಗಳಲ್ಲಿ 159 ಯೋಜನೆಗಳನ್ನು ಜಾರಿಗೆ ತಂದು ಇವುಗಳಲ್ಲಿ ಕೃಷಿ ಬಾಗ್ಯ, ಅನ್ನ ಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ, ರೈತರ ಸಾಲ ಮನ್ನಾ, ದಲಿತರ ಸಾಲ ಮನ್ನಾ ಹಾಗೂ ರಾಜ್ಯಕ್ಕೆ ನನ್ನ ಖಾತೆಯಾದ ನೀರಾವರಿಗೆ ಅತೀ ಹೆಚ್ಚಿನ ಅನುದಾನವನ್ನು ನೀಡಿ ಎಲ್ಲಾ ರೈತರ ಜಮೀನಗಳಿಗೆ ನೀರು ಕೊಡಲಾಗಿತ್ತು ಎಂದರು.

ಸಿಂದಗಿ ತಾಲ್ಲೂಕಿನ ಕೋರವಾರ ಬ್ರಾಂಚ್ ಕಾಲುವೆ ಮುಖಾಂತರ ಬಹು ಹಳ್ಳಿಗಳಿಗೆ ನೀರು ಹರಿಸಿದ್ದು ದಿ.ಎಂ ಸಿ ಮನಗೂಳಿ ಯವರ ಕನಸಿನ ಯೋಜನೆ ಯಾಗಿದ್ದು ಇದರ ನಿಮಿತ್ತವಾಗಿ ಕಾಂಗ್ರೆಸ್ ಪಕ್ಷವು ಅಕಾಲಿಕ ಮರಣಕ್ಕೆ ಈಡಾದ ಮನಗೂಳಿ ಯವರ ಸುಪುತ್ರ ಅಶೋಕ ಮನಗೂಳಿ ಯವರಿಗೆ ಟಿಕೇಟ ನೀಡಲಾಗಿದೆ. ಅವರ ಪರ ಮತ ಯಾಚನೆಗಾಗಿ ನಿಮ್ಮ ಬಳಿ ನಾವೆಲ್ಲ ಕಾಂಗ್ರೆಸ್ ಮುಖಂಡರು ಬಂದಿದ್ದೇವೆ ಕಾರಣ ಗ್ರಾಮದ ವತಿಯಿಂದ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಹೆಚ್ಚಿನ ಮತವನ್ನು ನೀಡಿ ಆರಿಸಿ ತರಬೇಕು ಎಂದು ವಿನಂತಿಸಿದರು

ಮಾಜಿ ಶಾಸಕ ಶರಣಪ್ಪ ಟಿ ಸುಣಗಾರ ಮಾತನಾಡಿ, ದಿ!! ಎಂ ಸಿ ಮನಗೂಳಿ ಯವರು ಅಕಾಲಿಕ ಮರಣ ಹೊಂದಿದ ಪ್ರಯುಕ್ತ ಈ ಉಪ ಚುನಾವಣಾ ಬಂದಿದೆ ಈ ಚುನಾವಣೆಗೆ ನಾನು ಹಾಗೂ ಅಶೋಕ ಇನ್ನು ಹಲವರು ಟಿಕೇಟ್ ಕೇಳಿದ್ದು ರಾಜ್ಯಮಟ್ಟದ ನಾಯಕರ ಮುಂದೆ ನನ್ನ ಮಗನಿಗೆ ಕಾಂಗ್ರೆಸ್ ಪಕ್ಷ ಕ್ಕೆ ಸೇರಿಸಿಕೊಳ್ಳಿ ಎಂದು ಮನಗೂಳಿ ಮಾಮ ಹೇಳಿದ್ದರು ಆದರಿಂದ ಅಶೋಕನಿಗೆ ಟಿಕೇಟ್ ಕೊಟ್ಟಿದ್ದು ನನಗೆ ಯಾವುದೇ ಬೇಸರವಿಲ್ಲ ಈ ಚುನಾವಣೆಯಲ್ಲಿ ಅಶೋಕನ ಗೆಲುವಿಗಾಗಿ ಹಗಲಿರುಳು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ರಾಜು ಆಲಗೂರ, ಎಸ್ ಎಂ ಪಾಟೀಲ್ ಗಣಿಹಾರ, ಸುಬಾಸ ಛಾಯಗೋಳ,ಸುರೇಶ ಗೋಣಸಗಿ, ರಾಜು ಕುಚಬಾಳ, ಬಶೀರ ಸೇಟ್ ಬೇಪಾರಿ,ಎಂ ಎ ಖತೀಬಾ, ನರಸಿಂಹ ಪ್ರಸಾದ ತಿವಾರಿ, ಚನ್ನು ವಾರದ, ಮುರಗೇಪ್ಪಗೌಡ ರದ್ದೇವಾಡಗಿ

ಪ್ರಕಾಶಗೌಡ ಪಾಟೀಲ ಬಾಗಪ್ಪ ಪಾಟೀಲ್ ಆಹೇರಿ, ಬೀಮನಗೌಡ ಪಾಟೀಲ,ಮೈಬೂಬ ಕಣ್ಣಿ ಮಲ್ಲಿಕಾರ್ಜುನ ಸಾವಳಸಂಗ ವಕ್ತಾರರು ಉಪಸ್ಥಿತರಿದ್ದರು. ನಾಗರಾಜ ಲಂಬೂ ನಿರೂಪಿಸಿದರು, ನಿಂಗನಗೌಡ ಪಾಟೀಲ ವಂದಿಸಿದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

RELATED ARTICLES

Most Popular

error: Content is protected !!
Join WhatsApp Group