ಬೀದರ – ವಿಧಾನ ಪರಿಷತ್ ಚುನಾವಣೆಯಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಬೀದರ್ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆಯಲ್ಲಿ ಸೀರೆ ಹಂಚಿದ್ದ ಈ ಇಬ್ಬರೂ ನಾಯಕರು ಸೀರೆ ಉಟಕೊಂಡು ಟಿಕ್ಕಾ ಹಚ್ಚಿಕೊಂಡು ಮನೆಯಲ್ಲೆ ಇರಲಿ ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಸೀರೆ ಬೆಳ್ಳಿ ನಾಣ್ಯ ಕೊಟ್ಟಿದ್ದೀರಿ ಆದರೂ ಜನ ಆರಿಸಲಿಲ್ಲ. ಅವು ಸೀರೆ ನೀವು ಮತ್ತು ಕೇಂದ್ರ ಸಚಿವ ಭಗವಂತ ಖೊಬಾ ಉಟ್ಟಕೊಂಡು ಮನೆಯಲ್ಲಿ ಇರಿ ಎಂದು ಪತ್ರಕರ್ತರೆದುರು ವಾಗ್ದಾಳಿ ನಡೆಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ