Homeಸುದ್ದಿಗಳುಸತತ ಪ್ರಯತ್ನವೇ ಸಾಧನೆಗೆ ದಾರಿ; ಪಿ. ಎಮ್. ದೋರನಳ್ಳಿ

ಸತತ ಪ್ರಯತ್ನವೇ ಸಾಧನೆಗೆ ದಾರಿ; ಪಿ. ಎಮ್. ದೋರನಳ್ಳಿ

ಬಸವನಬಾಗೇವಾಡಿ: “ಯುವಕರು ಆಧುನಿಕ ಆಕರ್ಷಣೆಗೆ ಒಳಗಾಗದೆ ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು. ಅದಕ್ಕಾಗಿ ಸತತವಾಗಿ ಪ್ರಯತ್ನ ಮಾಡಿದಾಗ ಮಾತ್ರ ಸಾಧನೆಯ ದಾರಿ ಕಂಡುಕೊಳ್ಳಲು ಸಾಧ್ಯ ಎಂದು ಪೊಲೀಸ್ ಉಪ ನಿರೀಕ್ಷಕ ಪಿ. ಎಮ್. ದೋರನಳ್ಳಿ ಹೇಳಿದರು.

ಇವರು “ಅರಿವು ಯುವ ಕೇಂದ್ರ. ಬಸವನಬಾಗೇವಾಡಿ”. ಉದ್ಘಾಟನಾ ಸಮಾರಂಭ ಹಾಗೂ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಗಮೇಶ ಪೂಜಾರಿ ಇವರು, ಯುವಕರು ದೇಶ ಭಕ್ತಿ, ಸಾಮಾಜಿಕ ಜವಾಬ್ದಾರಿ, ಶೈಕ್ಷಣಿಕ ಅರ್ಹತೆ, ಸ್ಪರ್ಧಾತ್ಮಕ ಮನೋಭಾವ, ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕ ವಲಯದಲ್ಲಿ ಮುನ್ನಡೆಯಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಅತಿಥಿಗಳಾದ ಡಾ. ವಿಜಯಲಕ್ಷ್ಮಿ ಹಾದಿಮನಿ, ಪ್ರಾಧ್ಯಾಪಕರು. ಬಿ.ಎಲ್.ಡಿ.ಇ ಆಯುರ್ವೇದ ಮಹಾವಿದ್ಯಾಲಯ, ವಿಜಯಪುರ ಇವರು. ಯುವಕರು ಪರಿಸರ ಪ್ರಜ್ಞೆ ಬೆಳಸಿಕೊಳ್ಳಬೇಕು. ಇಂದು ಕಲುಷಿತ ವಾತಾವರಣ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ವಾತಾವರಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ. ಮ.ನಿ. ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು, ವಿರಕ್ತಮಠ ಇವರು ಯುವಕರು ಎಲ್ಲಾ ರಂಗಗಳಲ್ಲಿ ಮುಂದೆ ಬರಬೇಕು. ಮೊಬೈಲ್ ಯುವಕರನ್ನು ಕ್ರೀಯಾಶೀಲತೆಯಿಂತ ವಂಚಿತರನ್ನಾಗಿಸುತ್ತಿದೆ. ಆದ್ದರಿಂದ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಯೋಗ ಗುರು ಶ್ರೀ ಕಾಶೀನಾಥ ಅವಟಿ ಅವರು ಸ್ವಾಮಿ ವಿವೇಕಾನಂದರ ಸಂದೇಶ ನೀಡಿದರು.

ಕಚುಸಾಪ ಅಧ್ಯಕ್ಷರಾದ ಪ್ರಭಾಕರ್ ಖೇಡದ ಅವರು ತಮ್ಮ “ಕೇಳು ಕೇಳು ಓ ಯುವಕ ನಾಳೆ ನೀನೇ ನಾಯಕ” ಕವನ ಹಾಡುತ್ತಾ,ಕೆಲವು ಚುಟುಕು ವಾಚಿಸುವದರ ಮೂಲಕ ಅರಿವು ಯುವ ಕೇಂದ್ರಕ್ಕೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಎನ್. ಎಸ್. ಹೂಗಾರ ಇವರು ಯುವಕರು ಹೊಸ ಆಲೋಚನೆಗಳೊಂದಿಗೆ ಮುನ್ನಡೆಯಿರಿ ಎಂದರು. ಅರಿವು ಯುವ ಕೇಂದ್ರದ ಅಧ್ಯಕ್ಷರಾದ ಸಂಗಮೇಶ ಬಾಗೇವಾಡಿ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನಾಡಿನ ಖ್ಯಾತ ಮಹನೀಯರ ಚಿತ್ರಕಲೆ, ಹಾಗೂ ಶಿಲ್ಪ ಕಲೆ, ಮಾರ್ಬಲ್ ಕಲೆ ಪ್ರದರ್ಶನವನ್ನು ಕು. ಶ್ರವಣ. ಪ್ರದೀಪ್, ಈಶ್ವರ ಇವರು ಪ್ರದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಪ್ರೊ. ಪಿ. ಎಲ್. ಹೀರೆಮಠ. ವಾಯ್. ಕೆ. ಪತ್ತಾರ. ಶ್ರೀಮತಿ. ಶೀಲಾ ಅವಟಿ. ನಾಗೇಶ್ ನಾಗೂರ, ಶ್ರೀಶೈಲ ಗಂಗೂರಿ,ಕುಮಾರ ಪವಾರ ಆಗಮಿಸಿದ್ದರು ಮತ್ತು ಅರಿವು ಯುವ ಕೇಂದ್ರದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ ಹಡಪದ ಸ್ವಾಗತಿಸಿದರು. ಮಾಳಿಂಗರಾಯ ಕಡ್ಲಿಮಟ್ಟಿ ಪ್ರಾಸ್ತಾವಿಕ ಮಾತನಾಡಿದರು. ದಾನೇಶ ಬಡಿಗೇರ ವಂದಿಸಿದರು. ಈಶ್ವರ ಹಳ್ಳಿ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group