spot_img
spot_img

ದಸರಾ ಕ್ರೀಡಾಕೂಟ: ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Must Read

- Advertisement -

ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ ಶೀಗಿಹಳ್ಳಿ (1500 ಮೀ  ಓಟ ಪ್ರಥಮ), ಸೀಮಾ ಹೊಸೂರ(400 ಮೀ ದ್ವಿತೀಯ), ಚೇತನ ಗಡಾದ (ತ್ರಿವಿಧ ಜಿಗಿತ ಪ್ರಥಮ), ಸಾನಿಕಾ ಕುಲಕರ್ಣಿ ( 400 ಮೀ ಪ್ರಥಮ, 800 ಮೀ ದ್ವಿತೀಯ) ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಲ್ಲದೇ ಸಾವಕ್ಕಾ ಶೀಗಿಹಳ್ಳಿ (1500 ಮೀ ತೃತೀಯ) ಹಾಗೂ ಬಾಲಕಿಯರ ಖೋಖೋ ತಂಡ ದ್ವಿತೀಯ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜೆ.ಆರ್. ನರಿ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ಎಸ್.ವಿ.ಬಳಿಗಾರ, ಎಂ.ಎನ್.ಕಾಳಿ, ಕೆ.ಐ.ಯರಗಂಬಳಿಮಠ ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಸ್ಥರು, ಹಳೆಯ‌ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಊಸರವಳ್ಳಿಯ ಆತ್ಮಹತ್ಯೆ

ಊಸರವಳ್ಳಿ ಆತ್ಮಹತ್ಯೆ ಕಾಡಿನಲ್ಲಿ ಒಂಟಿ ಬದುಕು ಹೊಟ್ಟೆಗಾಗಿ ಬಣ್ಣ ಬದಲಿಸುತ್ತಿತ್ತು ನಿರುಪದ್ರವ ಜೀವಿ ಊಸರವಳ್ಳಿ ಶ್ರೀಗಂಧ ಕಳ್ಳರು ಕಾಡಿಗೆ ಬೆಂಕಿ ಗಣಿ ಲೂಟಿ ಮರಳು ದಂಧೆ ಹುಲಿ ಚರ್ಮ ಆನೆ ಕೊಂಬಿನ ಭರ್ಜರಿ ಮಾರಾಟ ಕೆರೆ ಹಳ್ಳ ನದಿ ಅತಿಕ್ರಮಣ ಲೋಕಾಯುಕ್ತದಿಂದ ಎಸ ಆಯ್ ಟಿ ಯಿಂದ ಕ್ಲೀನ್...
- Advertisement -

More Articles Like This

- Advertisement -
close
error: Content is protected !!
Join WhatsApp Group