ಬೆಳಗಾವಿಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ ರವರನ್ನು ಭೇಟಿಯಾಗಿ ಸೇವಾಭದ್ರತೇ ಕುರಿತು ಚರ್ಚಿಸಲಾಯಿತು.
ಸಚಿವರು ಸದ್ಯದಲ್ಲಿ ತಮ್ಮನ್ನು ಮುಂದುವರಿಸಲು ಆದೇಶಿಸಿದ್ದೇನೆ.. ಜೊತೆಗೆ ವೇತನ ಹೆಚ್ಚಿಸಲಾಗುವುದು ಹಾಗೂ ತಮ್ಮ ಬೇಡಿಕೆ ಕಾಯಮಾತಿಗಾಗಿ ಇದ್ದರೆ ಅದು ಸಾದ್ಯವಿಲ್ಲ ಸೇವಾಭದ್ರತೆ ಸಂಬಂಧ ಪಶ್ಚಿಮ ಬಂಗಾಳ ಮಾದರಿಯಲ್ಲಿ ಮಾಡುವ ಹಂತದಲ್ಲಿ ಇದ್ದೆವೇ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ ಸದಸ್ಯರುಗಳಾದ ಅರುಣ ಶಾಹಪೂರ, ಹಣಮಂತ ನಿರಾಣಿ ಹಾಗೂ ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಬಿಜೆಪಿಯ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಉಪಸ್ಥಿತರಿದ್ದರು..
ಅತಿಥಿ ಉಪನ್ಯಾಸಕರುಗಳಾದ ಶಿವಾನಂದ ಕಲ್ಲೂರ, ನಂದೀಶ್ ಕರಾಳೆ, ರಾಜು ಕಂಬಾರ, ಲಕ್ಷ್ಮಣ ಸನದಿ, N B ಕೊಪ್ಪದ, ಸಂಗ್ರೆಜಿಕೊಪ್ಪ ಭಾಗವಹಿಸಿದ್ದರು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಎಲ್ಲಾ ಸಂಘಟನೆಗಳ ಒಕ್ಕೂಟದ ಪರವಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ