ಸಚಿವರ ಭೇಟಿಯಾದ ಉಪನ್ಯಾಸಕರ ನಿಯೋಗ

Must Read

ಬೆಳಗಾವಿಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ ರವರನ್ನು ಭೇಟಿಯಾಗಿ ಸೇವಾಭದ್ರತೇ ಕುರಿತು ಚರ್ಚಿಸಲಾಯಿತು.

ಸಚಿವರು ಸದ್ಯದಲ್ಲಿ ತಮ್ಮನ್ನು ಮುಂದುವರಿಸಲು ಆದೇಶಿಸಿದ್ದೇನೆ.. ಜೊತೆಗೆ ವೇತನ ಹೆಚ್ಚಿಸಲಾಗುವುದು ಹಾಗೂ ತಮ್ಮ ಬೇಡಿಕೆ ಕಾಯಮಾತಿಗಾಗಿ ಇದ್ದರೆ ಅದು ಸಾದ್ಯವಿಲ್ಲ ಸೇವಾಭದ್ರತೆ ಸಂಬಂಧ ಪಶ್ಚಿಮ ಬಂಗಾಳ ಮಾದರಿಯಲ್ಲಿ ಮಾಡುವ ಹಂತದಲ್ಲಿ ಇದ್ದೆವೇ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರಿಷತ್ ಸದಸ್ಯರುಗಳಾದ ಅರುಣ ಶಾಹಪೂರ, ಹಣಮಂತ ನಿರಾಣಿ ಹಾಗೂ ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಬಿಜೆಪಿಯ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಉಪಸ್ಥಿತರಿದ್ದರು..

ಅತಿಥಿ ಉಪನ್ಯಾಸಕರುಗಳಾದ ಶಿವಾನಂದ ಕಲ್ಲೂರ, ನಂದೀಶ್ ಕರಾಳೆ, ರಾಜು ಕಂಬಾರ, ಲಕ್ಷ್ಮಣ ಸನದಿ, N B ಕೊಪ್ಪದ, ಸಂಗ್ರೆಜಿಕೊಪ್ಪ ಭಾಗವಹಿಸಿದ್ದರು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಎಲ್ಲಾ ಸಂಘಟನೆಗಳ ಒಕ್ಕೂಟದ ಪರವಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group