ಮುನವಳ್ಳಿ; ಪಟ್ಟಣದ ಶ್ರೀ ವ್ಹಿ. ಪಿ.ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿಶಾಲೆಯಲ್ಲಿ ದಿ. ದಿಲೀಪ ವಾಯ್ ಜಂಬಗಿ ರವರ 72 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿ. ಡಿ. ಸಿ. ಸಿ.ಬ್ಯಾಂಕ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಪಂಚನಗೌಡ ಬ.ದ್ಯಾಮನಗೌಡ್ರ ಮಾತನಾಡುತ್ತಾ, ” ಜೇವೂರ ಗುರುಗಳು ಶೈಕ್ಷಣಿಕ ಕ್ರಾಂತಿ ಮಾಡಿದರು.ಅವರ ಶಿಷ್ಯರಾದ ದಿ. ದಿಲೀಪ ವಾಯ್. ಜಂಬಗಿ ಯವರು ಗುರುಗಳ ಮಾರ್ಗದರ್ಶನದಲ್ಲಿ ಬಡ ದೀನ ದಲಿತ ಸಮಾಜ ಸೇವೆಯೊಂದಿಗೆ ವಿಕಲಚೇತನ ಮಕ್ಕಳ ಕ್ಷೇತ್ರದಲ್ಲಿ ಕಿವುಡ ಮತ್ತು ಮೂಕ ಮಕ್ಕಳ ಶಿಕ್ಷಣ ಕ್ಕೆ ಶಾಲೆ ತೆರೆದು ಆ ಶಾಲೆಗೆ ಗುರುಗಳ ಹೆಸರಿಟ್ಟು ಶ್ರವಣ ದೋಷ ಮಕ್ಕಳ ಶಿಕ್ಷಣ ದಲ್ಲಿ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದಂತಹ ಧೀಮಂತ ವ್ಯಕ್ತಿ. ಗುರುಗಳಿಗೆ ತಕ್ಕ ಆದರ್ಶ ಶಿಷ್ಯನಾಗಿರುವರು”ಎಂದು ತಿಳಿಸಿದರು.
ನಾನು ಕೂಡ ಯಾವುದೇ ಸಂದರ್ಭದಲ್ಲಿಯೂ ತಮ್ಮ ಕಾರ್ಯ ಕ್ರಮ ಗಳಿಗೆ ಸಹಾಯಹಸ್ತ ನೀಡುತ್ತೆನೆಂದು ಹೇಳಿದರು.
ಈ ಕಾರ್ಯಕ್ರಮದ ಪ್ರಾರಂಭದಲ್ಲಿ ರಾಧಾ ಕುಲಕರ್ಣಿ, ಸುಜಾತಾ ರೆ ಜಂಬಗಿ,ಸಂಸ್ಥೆಯ ಅಧ್ಯಕ್ಷರಾದ ಪಂಚಪ್ಪ ವಾಯ್ ಜಂಬಗಿ, ಉಪಾಧ್ಯಕ್ಷರಾದ ಪಂಚಪ್ಪ ಗೋ ಜಂಬಗಿ, ಕಾರ್ಯದರ್ಶಿ ಬಸವರಾಜ ಪಿ ಮಾದರ ಮೊದಲಾದವರು ಜಂಬಗಿಯರವರ ಮೂರ್ತಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ ವೀರಣ್ಣ ಕೊಳಕಿ,ಶಶಾಂಕ ಪೂಜೇರ, ಮುಖ್ಯೋಪಾಧ್ಯಾಯರಾದ ಎಲ್ ಎಚ್ ವಟ್ನಾಳ ಶಿಕ್ಷಕರಾದ ಶಿವು ಕಾಟಿ, ಅಜಯ ಕಂಬನ್ನವರ,ವೀರು ಕಳಸನ್ನವರ, ಮಂಜುನಾಥ ಮಾವಿನಕಟ್ಟಿ, ಅತ್ತಾರ , ಸುಜಾತಾ ಬಡ್ಲಿ ಮತ್ತು ಜೈಂಟ್ಸ್ ಗ್ರುಪ್. ಸಹೇಲಿ ಗ್ರುಪ್ ಮುನವಳ್ಳಿ ಹಾಗೂ ಜೇವೂರ ಪ್ರತಿಷ್ಠಾನದ ಸದಸ್ಯರು ಪಾಲ್ಗೊಂಡಿದ್ದರು.