ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿದ ಎಸ್ ಪಿ, ಪೊಲೀಸರ ಸಖತ್ ಡಾನ್ಸ್ !
ಬೀದರ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಅವರು ಡಾ. ರಾಜ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಹಾಡಿದರೆ ಉಳಿದ ಪೊಲೀಸರು ಹಾಡಿಗೆ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ ಅಧಿಕಾರಿ ಮಹೇಶ್ ಮೇಘನ್ನವರ ಕೂಡ ಸಕತ್ ಡ್ಯಾನ್ಸ್ ಮಾಡಿದರು.
ಜಿಲ್ಲಾ ಪೊಲೀಸ ವಾರ್ಷಿಕ ಕ್ರೀಡಾಕೂಟ ಮುಕ್ತಾಯ ಸಮಾರಂಭದಲ್ಲಿ ವಿಶೇಷ ವೇಷ ಧರಿಸಿ ಮನರಂಜನೆ ನೀಡಿದರು.
ಬೀದರ್ ಜಿಲ್ಲಾ ಪೊಲೀಸ ಕವಾಯತು ಮೈದಾನದಲ್ಲಿ ನಡೆದ ಮುಕ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ಕಲಬುರಗಿ ವಲಯದ ಐಜಿಪಿ ಮನೀಶ ಕೂಡ ಬಾಗಿಯಾಗಿದ್ದರು ಅಲ್ಲದೆ ವಾರ್ಷಿಕ ಕ್ರೀಡಾಕೂಟದಲ್ಲಿ ಹಲವು ಪೊಲೀಸ ಅಧಿಕಾರಿ ಗಳು ಬಾಗಿಯಾಗಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ