ಕರಲಿಂಗಣ್ಣವರಿಗೆ ಹಂಪಿ ಕನ್ನಡ ವಿವಿ ಡಾಕ್ಟರೇಟ್

Must Read

ಹುನಗುಂದ: ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ.

ಡಾ. ಎಂ ಮಲ್ಲಿಕಾರ್ಜುನ ಗೌಡ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಥಾಸಾಹಿತ್ಯ ಕುರಿತ ವಿಮರ್ಶೆಗಳ ತಾತ್ವಿಕ ಅಧ್ಯಯನ’ ಮಹಾಪ್ರಬಂಧವನ್ನು ಮಂಡಿಸಿರುವ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ದಿನಾಂಕ 29-01-2026ರಂದು ಮೌಖಿಕ ಪರೀಕ್ಷೆ ನಡೆಸಿ ಪಿಎಚ್.ಡಿ. ಪದವಿ ನೀಡಲಾಯಿತು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು ಡಾ. ವೆಂಕಟಗಿರಿ ದಳವಾಯಿ, ಭಾಷಾ ನಿಖಾಯ ಡೀನ್ ಆದ ಡಾ. ಮಾಧವ ಪೆರಾಜೆ, ಮೌಲ್ಯಮಾಪಕರಾದ ಧನಂಜಯ ಕುಂಬ್ಳೆ, ಆಂತರಿಕ ವಿಷಯ ತಜ್ಞರಾದ ಸಿ. ವೆಂಕಟೇಶ್ ಅವರ ಸಮ್ಮುಖದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗಿಡ್ಡನಾಯಕನಾಳ ಗ್ರಾಮದ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪಿಎಚ್. ಡಿ ಪದವಿ ಘೋಷಣೆ ಮಾಡಿದ್ದಕ್ಕೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ವೆಂಕಟಗಿರಿ ದಳವಾಯಿ, ಮಾರ್ಗದರ್ಶಕರು ವಿಶ್ವವಿದ್ಯಾಲಯದ ಸಂಶೋಧರು, ಹಿತೈಷಿಗಳು, ಸ್ನೇಹಿತರು ಹಾಗೂ ಕುಟುಂಬ ವರ್ಗ, ಸಂಬಂಧಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಸಾಹಿತಿ, ಅಂಕಣಕಾರ ಬನ್ನೂರು ಕೆ. ರಾಜು ಅವರ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಲಿ

ಸಾಹಿತಿ, ಸಂಸ್ಕೃತಿಯ ಸಂಘಟಕ, ಅಂಕಣ ಬರಹಗಾರ, ಪತ್ರಕರ್ತ, ಕನ್ನಡ ನೆಲ, ಜಲ, ಭಾಷೆ ವಿಷಯಕ್ಕೆ ಬಂದಾಗ ಹೋರಾಟಕ್ಕೆ ನಿಲ್ಲುವ ಕನ್ನಡ ಪ್ರೇಮಿ, ಕವಿ ಬನ್ನೂರು ಕೆ...

More Articles Like This

error: Content is protected !!
Join WhatsApp Group