ದಿನಾಂಕ 18/03/2021 ರಂದು ಜಲಜೀವನ್ ಮಿಷನ್ ಅಡಿ ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ, RDS ಸಂಸ್ಥೆ ಮುರಗೋಡ ಇವರ ಸಹಯೋಗದೊಂದಿಗೆ ಅರೋಗ್ಯ ಮತ್ತು ನೈರ್ಮಲ್ಯ ಕುರಿತು ಶಾಲಾ ಮಕ್ಕಳಿಗೆ ಹಾಗು ಸಮುದಾಯಕ್ಕೆ ಕಿರು ಚಿತ್ರ ಪ್ರದರ್ಶನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಭಿಯಂತರ ಎ. ಎಸ್. ಬಣಗಾರ ಹಾಗೂ ಚಿಕ್ಕೋಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರಣಗೌಡ, ರಾಜೇಂದ್ರ ಮೈಗೂರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು ದೀಪಕ್ ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ RWDS ಇಲಾಖೆಯ ಅಧಿಕಾರಿಗಳು ಹಾಗೂ R.D.S ಸಿಬ್ಬಂದಿ ಶಿವರಾಜ್ ಹೊಳೆಪ್ಪಗೋಳ, ಶಶಿಕಾಂತ ಮಾನೆ ಹಾಜರಿದ್ದರು.
ಈ ಕಿರು ಚಿತ್ರ ಪ್ರದರ್ಶನ ವಾಹನ 2020-21 ಸಾಲಿನಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳ್ಳುವ 160 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಉದ್ದೇಶ,ಸಮುದಾಯ ವಂತಿಕೆ , ಸ್ವಚ್ಛ ಭಾರತ್ ಮಿಷನ್, ಶೌಚಾಲಯ ಬಳಕೆ, ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ಅರಣ್ಯೀಕರಣ, ಜಲ ಜೀವನ್ ಮಿಷನ್ ಯೋಜನೆಯಲ್ಲಿ ಸಮುದಾಯದ ಪಾತ್ರ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಜಲ ಜೀವನ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ದೀಪಕ್ ಕೆ ಅವರು ವಿವರಿಸಿದರು.