Homeಸುದ್ದಿಗಳುಸಿಲಿಕಾನ್ ಸಿಟಿಯಲ್ಲಿ "ಅರಿಶಿಣದಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ - ಗಣಪ" 

ಸಿಲಿಕಾನ್ ಸಿಟಿಯಲ್ಲಿ “ಅರಿಶಿಣದಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ – ಗಣಪ” 

ಬೆಂಗಳೂರು: ಬನಶಂಕರಿ 3 ನೇ ಹಂತದ ಗುರುದತ್ತ ಬಡವಾಣೆಯ ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರ ಮನೆಯಲ್ಲಿ ಅರಿಶಿಣದಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ – ಗಣಪ ಕೂರಿಸಿ  ಸರಳವಾಗಿ  ಗೌರಿ – ಗಣಪ ಹಬ್ಬವನ್ನು ಆಚರಿಸಲಾಯಿತು.

ಈ ಬಗ್ಗೆ   ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಜೊತೆ ಪತ್ರಿಕೆ ಮಾತುಕತೆ ನಡೆಸಿದ್ದು ಪತ್ರಿಕೆಯ ಓದುಗಾರಿಗಾಗಿ ಇಲ್ಲಿದೆ.

“ಅರಿಶಿಣದಲ್ಲಿ  ಗೌರಿ – ಗಣಪ ಮಾಡುವ ವಿಧಾನ” ಬಗ್ಗೆ ಮಾಹಿತಿ:

ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರ ಕೈ ಚಳಕದಲ್ಲಿ ಅರಳಿದೆ ಪರಿಸರ ಸ್ನೇಹಿ ಗೌರಿ ಮತ್ತು ಗಣೇಶ – ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಈ ಬಾರಿ ನನ್ನ ಮಗಳಾದ ಪ್ರತಿಕ್ಷಾ ಹಾಗೂ ನನ್ನ ಮಗ ಲಿಶಾಂತ್ ಹಾಗು ನನ್ನ ಪತಿ ವಿಜಯ್ ಕುಮಾರ್ ಎಲ್ಲರೂ ಸೇರಿ ಪರಿಸರ ಸ್ನೇಹಿ ಗೌರಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಾ ಇದ್ದೇವೆ ಎನ್ನುತ್ತಾರೆ ಶ್ರೀಮತಿ ಶಾಲಿನಿ ವಿಜಯ್ ಕುಮಾರ್.

ಅರಿಶಿಣದಲ್ಲಿ  ಗೌರಿ – ಗಣಪ ಮಾಡುವ ವಿಧಾನ: 

ಅರಿಶಿಣವನ್ನು ಹಾಲಿನಲ್ಲಿ ಕಲೆಸಿ 15 ನಿಮಿಷ ನೆನೆಸಿಟ್ಟು ನಂತರ  ಅರಳುತ್ತದೆ  ಪರಿಸರ ಸ್ನೇಹಿ ಗೌರಿ – ಗಣಪ – ಗಣಪತಿಯ ಸೊಂಡಲಿಗೆ ಚಿಕ್ಕ ಗಾತ್ರದ ಮರದ ಕಡ್ಡಿ ಹಾಗೂ ಕಣ್ಣಿಗೆ ಮೆಣಿಸಿನ ಬೀಜ ಇಟ್ಟು  ಪರಿಸರ ಸ್ನೇಹಿ ಗಣಪನನ್ನು ಮಾಡಿದ್ದೇನೆ ಎನ್ನುತ್ತಾರೆ ಶ್ರೀಮತಿ ಶಾಲಿನಿ ವಿಜಯ್ ಕುಮಾರ್.

ಅರಿಶಿಣದಿಂದ ಮಾಡಿದ ಗೌರಿ – ಗಣಪ ಪರಿಸರ ಸ್ನೇಹಿ ಯಾಗಿದ್ದು ವಿಸರ್ಜನೆ ಮಾಡಲು ಸುಲಭ !!  ಒಂದು ಸಣ್ಣ ಬಕೆಟ್ ನಲ್ಲಿ   ನೀರು ತುಂಬಿ ಅದರಲ್ಲಿ ವಿಸರ್ಜನೆ ಮಾಡಿ ನಂತರ ಆ ನೀರನ್ನು ಗಿಡಕ್ಕೆ ಹಾಕುವುದರಿಂದ  ಮನಸ್ಸಿಗೆ ನೆಮ್ಮದಿ ಎನ್ನುತ್ತಾರೆ ಪರಿಸರ ಪ್ರೇಮಿ ವಿಜಯ್ ಕುಮಾರ್

ಅರಿಶಿಣದಲ್ಲಿ  ಗೌರಿ – ಗಣಪ ಮಾಡುವ ವಿಧಾನ ನೀವು ಕಲಿತಿದ್ದು ಹೇಗೆ ? ಎಂಬ ಪ್ರಶ್ನೆಗೆ, ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರು ವಿಡಿಯೋ ನೋಡಿ ಪರಿಸರ ಸ್ನೇಹಿ ಗೌರಿ ಮತ್ತು ಗಣಪ ನನ್ನು ಮಾಡುವುದನ್ನು ಕಲಿತಿದ್ದೇನೆ ಎಂದು ನುಡಿದರು.

“ಪರಿಸರ ರಕ್ಷಣೆ ನಮ್ಮ ಹೊಣೆ”

ಮುಂಬರುವ ದಿನಗಳಲ್ಲಿ  ಪರಿಸರ ಸ್ನೇಹಿ ಗೌರಿ – ಗಣಪನನ್ನು ಇಟ್ಟು ಆಚರಿಸುವ ಮೂಲಕ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು  ನಮ್ಮೆಲ್ಲರಿಗೂ ಶ್ರೀಮತಿ  ಶಾಲಿನಿ ವಿಜಯ್ ಕುಮಾರ್ ಸ್ಪೂರ್ತಿ ಎಂದರೆ ತಪ್ಪಾಗಲಾರದು ಅಲ್ಲವೇ ??


ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

RELATED ARTICLES

Most Popular

error: Content is protected !!
Join WhatsApp Group