Homeಸುದ್ದಿಗಳುMudalgi: ಮನುಷ್ಯನ ಹಸ್ತಕ್ಷೇಪದಿಂದ ಪರಿಸರ ನಾಶವಾಗುತ್ತಿದೆ - ನ್ಯಾ. ಮೂ. ಜ್ಯೋತಿ ಪಾಟೀಲ

Mudalgi: ಮನುಷ್ಯನ ಹಸ್ತಕ್ಷೇಪದಿಂದ ಪರಿಸರ ನಾಶವಾಗುತ್ತಿದೆ – ನ್ಯಾ. ಮೂ. ಜ್ಯೋತಿ ಪಾಟೀಲ

ಮೂಡಲಗಿ – ಮನುಷ್ಯರಾದ ನಾವು ಹೆಜ್ಜೆ ಹೆಜ್ಜೆಗೂ ಪ್ರಕೃತಿಗೆ ವಿರುದ್ಧವಾಗಿ ಹೋಗುತ್ತಿದ್ದೇವೆ ಇದರಿಂದಾಗಿ ಹವಾಮಾನ ವೈಪರೀತ್ಯಗಳು ಜರುಗುತ್ತಿವೆ. ಸೃಷ್ಟಿಯಲ್ಲಿ ಒಂದು ಆಹಾರ ಸರಪಳಿ ಇರುತ್ತದೆ ಆದರೆ ಮನುಷ್ಯನ ಹಸ್ತಕ್ಷೇಪ ಪರಿಸರದಲ್ಲಿ ಜಾಸ್ತಿಯಾಗಿರುವುದರಿಂದ ಈ ಸರಪಳಿ ಹದಗೆಟ್ಟು ಪರಿಸರ ನಾಶವಾಗಿ ಮಳೆ ನಾಶವಾಗುತ್ತಿದೆ ಎಂದು ಮೂಡಲಗಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಪಾಟೀಲ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯಾಧಿಕಾರಿಗಳು, ಸಮಾಜ ಸೇವಕರು, ಪರಿಸರವಾದಿಗಳು ಅರಣ್ಯ ಬೆಳೆಸುವತ್ತ ಕಾರ್ಯೋನ್ಮುಖವಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಮಲಬನ್ನವರ ಮಾತನಾಡಿ, ಹವಾಮಾನ ವೈಪರೀತ್ಯಗಳಿಂದ ಜಗತ್ತು ನಲುಗುತ್ತಿದೆ. ಪರಿಸರ ನಾಶವೇ ಇದಕ್ಕೆ ಕಾರಣ. ವನಮಹೋತ್ಸವವೆಂಬುದು ಪ್ರತಿದಿನ ನಡೆಯಬೇಕು. ಪರಿಸರ ನಾಶದಿಂದ ಮನುಷ್ಯ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಇದು ನಿಲ್ಲಬೇಕಾದರೆ ಪರಿಸರ ಉಳಿಸಬೇಕು ಎಂದರು

ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ಎಲ್ಲರೂ ತಂತಮ್ಮ ಹುಟ್ಟು ಹಬ್ಬದಂಥ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು ಅದಕ್ಕಾಗಿ ನನ್ನ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.    

ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ವಿವಿಧ ಇಲಾಖೆಗಳು, ಸಂಘಟನೆಗಳ ವತಿಯಿಂದ ಎಲ್ಲ ಕಡೆಗಳಲ್ಲಿ ಸಸಿಗಳನ್ನು ನೆಡುವ ಕಾರ್ಯವನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಹಾಸ್ಟೆಲ್ ಆವರಣದಲ್ಲಿ ಕಾವೇರಿ ತಾಯಿಯ ಮೂರ್ತಿ ಅನಾವರಣಗೊಳಿಸಲಾಯಿತು.

ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು ಎಲ್ಲ ಅತಿಥಿಗಳಿಗೆ ಪುಸ್ತಕಗಳ ಕಾಣಿಕೆ ನೀಡಿದರು.

ವೇದಿಕೆಯ ಮೇಲೆ ಆರೋಗ್ಯಾಧಿಕಾರಿ ಡಾ. ಭಾರತಿ ಕೋಣಿ, ಹೆಸ್ಕಾಂ ಎಇಇ ನಾಗನ್ನವರ, ಸಿಡಿಪಿಒ ಅಧಿಕಾರಿ ಯಲ್ಲಪ್ಪ ಗದಾಡಿ, ಪಿಎಸ್ಐ ಹಾಲಪ್ಪ ಬಾಲದಂಡಿ, ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ, ಅರಣ್ಯಾಧಿಕಾರಿ ಮಹಾಂತೇಶ ಹಿಪ್ಪರಗಿ, ಚನ್ನಪ್ಪ ಅಥಣಿ, ಪುರಸಭಾ ಸದಸ್ಯ ಶಿವು ಚಂಡಕಿ, ಪ್ರಾಂಶುಪಾಲ ಶಾನೂರ ಗಾಣಿಗೇರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಹಾಸ್ಟೆಲ್ ನ ಉದ್ಯಾನವನದಲ್ಲಿ ಕಾವೇರಿ ಮಾತೆಯ ಮೂರ್ತಿ ಉದ್ಘಾಟಿಸಲಾಯಿತು. ಕಾವೇರಿ ಮೂರ್ತಿ ಪ್ರತಿಷ್ಠಾಪನೆಯ ಕಾರಣೀಕರ್ತ ಹಾಗೂ ಹಾಸ್ಟೆಲ್ ವಾರ್ಡನ್ ಆದ ಬಿ ವೈ ಕಾಪಶಿಯವರನ್ನು ಸತ್ಕರಿಸಲಾಯಿತು.

ವೈ ವಿ ಭಜಂತ್ರಿ ಸ್ವಾಗತಿಸಿ, ವಂದಿಸಿದರು, ಲಕ್ಕಪ್ಪ ಸನದಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group