Gurlapur: ಮಂಗಳ ರಸಗೂಬ್ಬರ ರೈತರ ಜೀವ ನಾಡಿ ಇದ್ದಂತೆ- ಭರತೇಶ

Must Read

ಗುರ್ಲಾಪೂರ (ಮೂಡಲಗಿ)– ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಮಂಗಳ ರಸಗೂಬ್ಬರ ಹಾಗು ಟಿ ಡಿ ಗಾಣಿಗೇರ ಹಾಗು ಕೆ ಆರ್ ದೇವರಮನಿ ಇವರ ಸಹಯೋಗದಲ್ಲಿ ರೈತರ ಮಂಗಳ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಮಂಗಳ ಕಂಪನಿಯ ಮಾರಾಟ ಉಪವ್ಯವಸ್ಥಾಪಕರಾದ ಭರತೇಶ ಬತಗಿ ಮಾತನಾಡಿ,  ಮಂಗಳ ರಸಗೂಬ್ಬರ ರೈತರ ಜೀವ ನಾಡಿ ಇದ್ದಂತೆ ಎಂದು ಹೇಳುತ್ತಾ ರೈತರು ಮಂಗಳಾ ರಸಗೂಬ್ಬರ ಬಹಳ ವರ್ಷಗಳಿಂದ ಬಳಸುತ್ತಾ ಬಂದಿರುತ್ತಾರೆ ಹೊಸ ವಿಧಾನಗಳಲ್ಲಿ ತಯಾರಿಸಿದ ಮಂಗಳ ರಸಗೂಬ್ಬರ ರೈತರು ಬಳಸುವ ವಿಧಾನದಲ್ಲಿ ಬದಲಾಣೆ ಮಾಡಿಕೊಳ್ಳುವದರಿಂದ ರೈತರಿಗೆ ಯಾವ ರೀತಿ ಲಾಭಗಳಾಗುತ್ತವೆ ಮತ್ತು ಅದರಿಂದ ಬೆಳೆ ಇಳುವರಿ ಪ್ರಮಾಣದ ಬಗ್ಗೆ ತಿಳಿಸಿದರು.

ರೈತರು ಸುಧಾರಿತ ಬೇಸಾಯ ಮಾಡುವುದು ಅತಿಅವಶ್ಯವಾಗಿದೆ ಅದೂ ಅಲ್ಲದೆ ಮಣ್ಣು ಪರಿಕ್ಷೆಗಳನ್ನು ಮಾಡುವದರಿಂದ ಯಾವ ಜಮೀನಿಗೆ ಯಾವ ಬೆಳೆಗೆ ಯಾವ ರಸಗೊಬ್ಬರ ಹಾಕುವದರೊಂದಿಗೆ ನಮ್ಮ ರೈತರಿಗೆ ಲಾಭಗಳಾಗುತ್ತವೆ ಎನ್ನುತ್ತಾ ಬರುವ ದಿನಗಳಲ್ಲಿ ಮಂಗಳ ಡಿ ಎ.ಪಿ ಯೂರಿಯಾಗಳನ್ನು ಬೆಳೆಗಳಿಗೆ ಬಳಸುವ ವಿಧಾನದ ಬಗ್ಗೆ ಹೇಳಿದರು.

ಕೇಂದ್ರ ಸರಕಾರವು ಒನ್ ನೇಷನ್ ಒನ್ ಫರ್ಟಿಲೈಜರ ಎಂಬ ಯೋಜನೆ ಅಡಿಯಲ್ಲಿ ಭಾರತದಲ್ಲಿ ರಸಗೂಬ್ಬರ ಮಾರಾಟ ಮಾಡಲಾಗುತ್ತಿದೆ ಆದ್ದರಿಂದ ರೈತರು ತಮ್ಮ ಆಧಾರಕಾರ್ಡ ತಗೆದುಕೊಂಡು ರಸಗೊಬ್ಬರ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ರೈತರಾದ ವಿ ಬಿ ಮುಗಳಖೋಡ, ವಾಯ್ ಬಿ ಕುಲಗೂಡ, ಕೆ ಆರ್ ದೇವರಮನಿ, ಜಯಪ್ರಕಾಶ ಗಾಣಿಗೇರ, ನಾಗಪ್ಪ ತಿಪ್ಪಿಮನಿ, ಬಸವರಾಜ ಗೂಲನ್ನವರ, ಕೆದಾರಿ ಗ ಮರಾಠೆ, ಸಂಜು ಹಳ್ಳೂರ, ಗಣಪತಿ ದೊಡಮನಿ, ಗುರಲಿಂಗ ಮುಗಳಖೋಡ, ಕಲ್ಲಪ್ಪ ಗೌಡರ, ಆನಂದ ವಡೆಯರ, ಮಲಕಾರಿ ಸಿಗಿಹಳ್ಳಿ, ತುಳಜಾರಾಮ ದೂಡಮನಿ, ಹನಮಂತ ಮುಗಳಖೋಡ, ಮಹಾದೇವ ಡವಳೆಶ್ವರ, ರಾಮಪ್ಪ ಹಳ್ಳೂರ, ಮಲ್ಲಪ್ಪ  ಮುಗಳಖೋಡ, ಬಸಪ್ಪ ಶೇಟ್ಟೆಪ್ಪಗೋಳ, ಸಿಬ್ಬಂದಿಯವರಾದ ಮಲ್ಲು ಜಕಾತಿ ಆನಂದ ಬೀಳಗಿ ಚನ್ನವೀರೇಶ ಕುರಹಟ್ಟಿ ಮತ್ತು ರೈತಬಾಂಧವರು ಆಗಮಸಿದ್ದರು.

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group