Homeಸುದ್ದಿಗಳುಸನ್ಮಾನ ಸಮಾರಂಭ

ಸನ್ಮಾನ ಸಮಾರಂಭ

ಬೆಳಗಾವಿ – ಖ್ಯಾತ ಸಾಹಿತಿ ಸ .ರಾ .ಸುಳಕೂಡೆ ಅವರ 25 ಕೃತಿಗಳ ವಿಮರ್ಶೆ ಮಾಡಿದ ಪ್ರೊ. ಯು ಎನ್ ಸಂಗನಾಳಮಠ ಅವರ “ಸತ್ಯಾನ್ವೇಷಣೆ” ಬಿಡುಗಡೆ ಸಂದರ್ಭ ಪ್ರಯುಕ್ತವಾಗಿ ಬೆಳಗಾವಿಯ ಶಿವಬಸವ ನಗರದಲ್ಲಿಯ ಜ್ಯೋತಿ ಮತ್ತು ಪಿ ಬಿ ಎಲಿಗಾರ್ ವಿಶ್ರಾಂತ ಡಿವೈಎಸ್ಪಿ ಮತ್ತು ಸಾಹಿತಿ ಅವರು ಸತ್ಕಾರ ಸಮಾರಂಭ ಏರ್ಪಡಿಸಿದ್ದರು.

ಕೆನಡಾ,ಯು,ಎನ್, ನಿವಾಸಿಗಳಾದ ಲಕ್ಷ್ಮೀ ನಾಗಪ್ಪ ಯಲಿಗಾರ, ಕುಮಾರಿ ದಿಯಾ ಮತ್ತು ಸುಲೋಚನ, ಸೋಮಶೇಖರ್ ಯಲಿಗಾರ್, ಹಿರಿಯರಾದ ಲೀಲಾ,ದೇಸೂರಕರ ಅವರ ಸಮ್ಮುಖದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಸ .ರಾ. ಸುಳಕೂಡೆ, ಬೆಳಗಾವಿ ಜಿಲ್ಲಾ ಕ ಸಾ ಪ ಕಾರ್ಯದರ್ಶಿಗಳಾದ ಮಹಾಂತೇಶ ಮೆಣಸಿನಕಾಯಿ ಮತ್ತು ದಾವಣಗೆರೆ ಜಿಲ್ಲಾ ಹೊನ್ನಾಳಿಯ ಹಿರಿಯ ಸಾಹಿತಿಗಳಾದ ಯು .ಎಸ್. ಸಂಗನಾಳಮಠ ಇವರನ್ನು ಪಿ. ಬಿ .ಯಲಿಗಾರರ ಪುತ್ರರಾದ ವಿಶ್ವನಾಥ್, ವಿಶಾಲ ಮತ್ತು ಸಂತೋಷ ಇವರು ಗೌರವ ಪೂವ೯ಕವಾಗಿ ಪಿ ಬಿ ಯಲಿಗಾರ್ ಅವರ ಸ್ವಗೃಹದಲ್ಲಿ ಸನ್ಮಾನಿಸಿದರು.

RELATED ARTICLES

Most Popular

error: Content is protected !!
Join WhatsApp Group