ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪಡೆದ ಸ್ವಾಮೀಜಿಗೆ ಸತ್ಕಾರ

Must Read

ಹುಬ್ಬಳ್ಳಿ –  ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ವತಿಯಿಂದ ಬೈಲಹೊಂಗಲದ ಮೂರು ಸಾವಿರ ಮಠದ ಪರಮಪೂಜ್ಯರಾದ ಶ್ರೀ ಮ ನಿ ಪ್ರ ಸ್ವ ಪ್ರಭು ನೀಲಕಂಠ ಮಹಾಸ್ವಾಮೀಜಿಗಳಿಗೆ ಇತ್ತೀಚೆಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕರುನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ಜಾರ್ಜಿಯಾದ ಟಿಬಿಲಿಸಿಯಲ್ಲಿ ಜರುಗಿತು

ಮೂರೂಸಾವಿರಮಠದ ಶ್ರೀ ಮ ನಿ ಪ್ರ ಸ್ವ ಪ್ರಭುನೀಲಕಂಠ ಸ್ವಾಮೀಜಿ ಪ್ರಶಸ್ತಿ ಸ್ವೀಕರಿಸಿ ಸ್ವದೇಶಕ್ಕೆ ಆಗಮಿಸಿದ ಹಿನ್ನೆಲೆ ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ವತಿಯಿಂದ ಸ್ವಾಮೀಜಿಗಳನ್ನು ಸತ್ಕರಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ, ತಾಲೂಕು ಅಧ್ಯಕ್ಷ ಡಾ. ಎಂ ಎನ್ ಬಾಳಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಛಬ್ಬಿ,ಹಿರಿಯರಾದ ತಿಪ್ಪಣ್ಣ ಬಿಳ್ಳೂರ, ಮಹಾಂತೇಶ ಅಕ್ಕಿ, ಶಿವಾನಂದ ಬಡ್ಡಿಮನಿ, ವಿಶ್ವನಾಥ ದೇಶನೂರ, ಮಹಾಂತ್ಕ ಕಾದ್ರೋಳ್ಳಿ, ಶರಣೆ ಅಂಗಡಿ ಹಾಗೂ ವಾಲಿ ಮೇಡಂ ಉಪಸ್ಥಿತರಿದ್ದರು

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group