Homeಸುದ್ದಿಗಳುಕಬ್ಬು ಕಟಾವು ಯಂತ್ರಕ್ಕೆ ಬೆಂಕಿ: ತಪ್ಪಿದ ಹೆಚ್ಚಿನ ಅನಾಹುತ

ಕಬ್ಬು ಕಟಾವು ಯಂತ್ರಕ್ಕೆ ಬೆಂಕಿ: ತಪ್ಪಿದ ಹೆಚ್ಚಿನ ಅನಾಹುತ

ಸಿಂದಗಿ – ತಾಲೂಕಿನ ಮುರಡಿ ಗ್ರಾಮದ ಶ್ರೀಶೈಲ ನಿಂಗಪ್ಪ ಜಂಬರ್ ಖಾನ್ ಎಂಬ ರೈತನ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಯಂತ್ರಕ್ಕೆ ಏಕಾ ಏಕಿಯಾಗಿ ಬೆಂಕಿ ಕಾಣಿಸಿಕೊಂಡು ಯಂತ್ರ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬೆಂಕಿಯು ಕಬ್ಬಿನ ಬೆಳೆಗೆ ಕೂಡ ವ್ಯಾಪಿಸಿದ್ದರಿಂದ ಬಾಗಶಃ ಕಬ್ಬು ಸುಟ್ಟಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅಗ್ನಿ ಶಾಮಕರಾದ ಹನುಮಂತ, ಅಗ್ನಿಶಾಮಕ ಚಾಲಕ ಮಹಾಂತೇಶ್ ಬಿ ಗೌಂಡಿ ಅಗ್ನಿ ಶಾಮಕರು ಮಾಂತೇಶ್ ಜಾಲಿಹಾಳ್ ರಾಜು ರಾಥೋಡ್ ಮಲ್ಕಣ್ಣ ಶ್ರೀಧರ್ ಇದ್ದರು.

ಇವರ ಜೊತೆ ಅಕ್ಕಪಕ್ಕದ ರೈತರೆಲ್ಲ ಸೇರಿ ಬೆಂಕಿಯನ್ನು ಆರಿಸಿದ್ದರಿಂದ ಹೆಚ್ಚಿನ ಅನಾಹುತವಾಗುವುದು ತಪ್ಪಿತೆನ್ನಲಾಗಿದೆ.

RELATED ARTICLES

Most Popular

error: Content is protected !!
Join WhatsApp Group