ಗೋಕಾಕ -ದಿನಾಂಕ. ೧೩. ೧೦. ೨೦೨೪ರಂದು ಮು ೧೦. ೦೦ಘಂಟೆಗೆ ಕೆ ಎಲ್ ಇ ಸಿ ಎಸ್ ಅಂಗಡಿ ಬ್ಯಾಳಿ ಕಾಟಾ ಗೋಕಾಕದಲ್ಲಿ ಸಾಹಿತಿ ಡಾ. ಸಾವಿತ್ರಿ ಕಮಲಾಪುರೆ ಅವರ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಪ್ರೊ ಚಂದ್ರಶೇಖರ ಅಕ್ಕಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ರಾಜು ಮುನವಳ್ಳಿ ಕೆ ಎಲ್ ಇ ನಿರ್ದೇಶಕರು ಮತ್ತು ಮಹಾಂತೇಶ ತಾವಂಶಿ ನಿ ಪೂ ಕ ಸಾ ಪ ತಾಲೂಕ ಅಧ್ಯಕ್ಷರು ಉಧ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಿಂದ ಗ್ರಂಥ ಲೋಕಾರ್ಪಣೆ ಡಾ ಎಸ್.ಕೆ ಮೇಲಕಾರ ಕನ್ನಡ ಶಾಸನಗಳ ಮೇಲ್ವಿಚಾರಕರು ,ನಿರ್ದೇಶಕರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ. ಶುಭಾ ಮರವಂತೆ,ಕಾರ್ಯಕ್ರಮ ಸಂಯೋಜನಾಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಖ್ಯಾತ ಸಾಹಿತಿಗಳು ,ದೂರದರ್ಶನದ ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿಂತಕಿಯರು. ಡಾ ಬಾಳಾಸಾಹೇಬ ಲೋಕಾಪೂರೆ ನಿಕಟ ಪೂರ್ವ ಸದಸ್ಯರು ಕೇಂದ್ರಸಾಹಿತ್ಯಅಕಾಡೆಮಿಯ ಸದಸ್ಯರು ನವದೆಹಲಿ . ಮಹಾಲಿಂಗ ಮಂಗಿ ಖ್ಯಾತ ಸಾಹಿತಿಗಳು , ಗೋಕಾಕ ಶ್ರೀಮತಿ ರಜನಿ ಜಿರಗ್ಯಾಳ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಅಧ್ಯಕ್ಷರು ಬೆಂಗಳೂರು / ಗೋಕಾಕ ಶ್ರೀಮತಿ , ಭಾರತಿ ಮದಬಾಂವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರು ಗೋಕಾಕ. ಬಿಡುಗಡೆ ಮಾಡಲಿದ್ದು ಕೃತಿ ಪರಿಚಯವನ್ನು ಡಾ ವಾಯ್ ಎಂ ಯಾಕೊಳ್ಳಿ, ಬಾಲಶೇಖರ ಬಂದಿ,ರೋಹಿಣಿ ಯಾದವಾಡ,ಜಯಾನಂದ ಮಾದರ, ಮಾಡಲಿದ್ದಾರೆ.ವಿವಿಧ ಸಂಘಟನೆಗಳು ನಮ್ಮೊಂದಿಗೆ ಇರಲ್ಲಿದ್ದು, ನಾಗೇಂದ್ರ ಬಾ ಹೊಸಮನಿ, ಡಾ ಸಾವಿತ್ರಿ ಕಮಲಾಪೂರ ಕಾರ್ಯಕ್ರಮ ಯಶಸ್ವಿ ಗೊಳಿಸಲು ವಿನಂತಿಸಿದ್ದಾರೆ.