Homeಸುದ್ದಿಗಳುಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗದ ಮೇಲೆ ಜನ್ಮ ದಿನ ಶುಭಾಶಯ ಕೋರುವ ಫ್ಲೆಕ್ಸ್!

ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗದ ಮೇಲೆ ಜನ್ಮ ದಿನ ಶುಭಾಶಯ ಕೋರುವ ಫ್ಲೆಕ್ಸ್!

ಶುಭಾಶಯಗಳನ್ನು ತಿಳಿಸುವಂಥ ವೈಯಕ್ತಿಕ ಬ್ಯಾನರ್‌ಗಳು ಮತ್ತು ರಾಜಕೀಯ ಅಥವಾ ಸಾರ್ವಜನಿಕ ಸೇವೆಗಳನ್ನು ತಿಳಿಸುವಂಥ ಜಾಹೀರಾತುಗಳನ್ನು ಬೆಂಗಳೂರು ನಗರದಲ್ಲಿ ಎಲ್ಲಿ ಎಲ್ಲಿ ನೇತು ಹಾಕಬಹುದು? ಅದಕ್ಕೆ ನ್ಯಾಯಾಲಯದ ಒಪ್ಪಿಗೆ ಇದೆಯೇ ?

ಬೆಂಗಳೂರು: ಇದೇ ಫೆ 5 ರಂದು ನಗರದಲ್ಲಿ ಕಳೆದ ಅನೇಕ ದಿನಗಳಿಂದ ಭಾರೀ ಪ್ರಮಾಣದಲ್ಲಿ ರಾಜ ರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣ ದಿಂದ ಕೂಗಳತೆ ದೂರದಲ್ಲಿ ಇರುವ ಪಾದಚಾರಿ ಮಾರ್ಗದ ಮೇಲೆ ಇರುವ ಕಂಬಗಳಿಗೆ ಫ್ಲೆಕ್ಸ್ ಕಟ್ಟಿ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡ ರಕಾರ್ಯಕ್ರಮಗಳ ಬಗ್ಗೆ ಫ್ಲೆಕ್ಸ್ ಹಾಕಿ ಪ್ರದರ್ಶನ ಮಾಡಿರುವುದು ಕಂಡು ಬರುತ್ತಿದೆ.

ರಾಜಕೀಯ ಪಕ್ಷಗಳಿಗೆ ಫ್ಲೆಕ್ಸ್ ಹಾಕುವುದು ಹಾಗೂ ಜಾಹೀರಾತು ಕುರಿತ ಫ್ಲೆಕ್ಸ್ ಗಳನ್ನು ಹಾಕುವುದನ್ನು ನ್ಯಾಯಾಲಯ ನಿಷೇಧ ಮಾಡಿ ಆದೇಶ ನೀಡಿದೆ ,ಆದರೂ ರಾಜ ರಾಜೇಶ್ವರಿ ನಗರದ ಹಾದಿಯಲ್ಲಿ ಕಂಡ ಕಂಡ ಕಡೆ ಫ್ಲೆಕ್ಸ್ ರಾರಾಜಿಸುತ್ತಿವೆ. ಹಾಗಾದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೆ ?

ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಫೆಬ್ರವರಿ 5 ರ ಬೆಳಿಗ್ಗೆ ಪಾದಚಾರಿ ಮಾರ್ಗದ ಮೇಲೆ ಹುಟ್ಟು ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಹಾಕಿ ಪಾದಚಾರಿಗಳಿಗೆ ಮಾರ್ಗ ವಿಲ್ಲದೆ,ರಸ್ತೆಯ ತುಂಬಾ ವಾಹನಗಳು,ಕೆಲಸಕ್ಕೆ , ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಫ್ಲೆಕ್ಸ್ ಅನ್ನು ನೋಡಿ ಹಿಡಿಶಾಪ ಹಾಕುತ್ತ ಸಾಗುತ್ತಿದ್ದ ದೃಶ್ಯ ಕಂಡು ಬಂತು.

ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಚಿತ್ರಗಳನ್ನು ಪ್ರಕಟಿಸದಂತೆ ನಿರ್ಬಂಧ ವಿಧಿಸಿದ್ದ ಸುಪ್ರೀಂ ಕೋರ್ಟ್‌ನ ಕಾಮನ್‌ ಕಾಸ್‌ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿ ರಾಜಕೀಯ ನಾಯಕರ ಅನಧಿಕೃತ ಜಾಹೀರಾತುಗಳನ್ನು ಹಾಕುವಂತಿಲ್ಲ ಎಂದು ಆದೇಶ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಫಲಕಗಳು ಅಥವಾ ರಾಜಕೀಯ ನಾಯಕರ ಅನಧಿಕೃತ ಜಾಹೀರಾತು/ಹೋರ್ಡಿಂಗ್‌ಗಳನ್ನು ಹಾಕದಂತೆ ಖಾತರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಸ್ಥಳೀಯರ ದೂರು:

ನಾಗರಿಕರಿಗೆ ಪಾದಚಾರಿ ಮಾರ್ಗ ದಲ್ಲಿ ನಡೆದು ಹೋಗಲು ಅವಕಾಶ ಇಲ್ಲದೆ ಓಡಾಡಲು ಕಷ್ಟಪಟ್ಟು ಸಾಗುತ್ತಿದ್ದರೂ ಸಂಬಂಧ ಪಟ್ಟ ಬಿ.ಬಿ.ಎಂ.ಪಿ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಅನ್ನುವ ಹಾಗೇ ಇದ್ದಾರೆ ಎಂಬುದು ಸ್ಥಳೀಯರ ದೂರು.

ನಿಮ್ಮ ನೀರಿನ ಹೋರಾಟ ಎಲ್ಲಿಗೆ ಬಂತು?

ಕತ್ತರಿ ಗುಪ್ಪೆ ಬಳಿ ಕಾಂಗ್ರೆಸ್ ಪಕ್ಷ ದ ನೀರಿನ ಹೋರಾಟದ ಫ್ಲೆಕ್ಸ್ ಹಾಕಲಾಗಿದ್ದು , ನಿಮ್ಮ ನೀರಿನ ಹೋರಾಟ ಎಲ್ಲಿಗೆ ಬಂತು ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ ಸಾರ್ವಜನಿಕರಲ್ಲಿ.

ಬಿಬಿಎಂಪಿ ಆಯುಕ್ತರ ಗಮನಕ್ಕೆ:

ಆರ್‌. ಆರ್. ನಗರದ ರಾಜರಾಜೇಶ್ವರಿ ಕಮಾನು ಮುಂಭಾಗದ ಪುಟ್ ಪಾತ್ ಮೇಲೆ ಫ್ಲೆಕ್ಸ್ ಹಾಕಿ ಹೈಕೋರ್ಟ್‌ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಬಿಬಿಎಂಪಿ ಆಯುಕ್ತರ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳುವ ಪ್ರಯತ್ನ ಕೂಡ ಮಾಡಿಲ್ಲ. ಬಿ,ಬಿ,ಎಂ,ಪಿ ಮಾತ್ರ ಈ ವಿಷಯದಲ್ಲಿ ಹೊದ್ದು ಮಲಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಸರ್ಕಾರಿ ಜಾಹೀರಾತು ಫಲಕಗಳನ್ನೇ ಹಾಕಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಬಿಬಿಎಂಪಿ ಕೂಡ ಜಾಹೀರಾತು ಪ್ರದರ್ಶನ ನಿಷೇಧಿಸಿದೆ. ಈ ಯಾವದೇ ನಿಯಮಗಳು ಆರ್‌.ಆರ್.ನಗರ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲವೇ ? ಹೈಕೋರ್ಟ್ ಆದೇಶ ಉಲ್ಲಂಘನೆ ಎಂದು ಗೊತ್ತಿದ್ದರೂ ವಲಯ ಬಿಬಿಎಂಪಿ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ. ಮುನಿರತ್ನಂ ಅವರ ವಿರುದ್ಧವಾಗಲೀ ಅಥವಾ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಕಾರಣ ಗೊತ್ತಿಲ್ಲ.

ಮುಂದಿನ ಚುನಾವಣಾ ತಯಾರಿಯಲ್ಲಿ ಬಿ,ಬಿ.ಎಂ .ಪಿ – ರಾಜ್ಯ ಸರ್ಕಾರ?

ಪ್ರಾಯಶಃ ಮುಂಬರುವ ಬಿ.ಬಿ,ಎಂ .ಪಿ ಚುನಾವಣಾ ತಯಾರಿಯಲ್ಲಿ ಬಿ,ಬಿ.ಎಂ .ಪಿ ಸಂಪೂರ್ಣವಾಗಿ ಬ್ಯುಸಿ ಆಗಿರಬಹುದು ಹಾಗು ರಾಜ್ಯ ಸರ್ಕಾರ ಮುಂದಿನ ಚುನಾವಣೆಯ ಮತ ಲೆಕ್ಕ ಹಾಕುವುದರಲ್ಲಿ ಬ್ಯುಸಿ ಆಗಿರಬಹುದು. ಆದರೆ ಪಾದಚಾರಿ ಮಾರ್ಗವಿದ್ದರೂ ಪಾದಚಾರಿಗಳು ರಸ್ತೆಯ ಮಧ್ಯದಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆರ್ ಆರ್. ನಗರದಲ್ಲಿ. ಇದು ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವೈಖರಿ ಎನ್ನೋಣವೇ ? ರಾಜ್ಯ ಸರ್ಕಾರದ ಕಾರ್ಯವೈಖರಿ ಎನ್ನೋಣವೇ ? ಹೆಚ್ಚಿನ ವಾಹನ ದಟ್ಟಣೆ ಇರುವ ಈ ಸ್ಥಳದಲ್ಲಿ ಅಪಘಾತ ಸಂಭವಿಸುವ ಮುನ್ನ ಬಿ,ಬಿ,ಎಂ.ಪಿ ಹಾಗು ರಾಜ್ಯ ಸರ್ಕಾರ ಎಚ್ಚೆತುಕೊಳ್ಳಲಿ ಎಂದು ಆಶಿಸೋಣ ಅಲ್ಲವೇ ?


ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ , ಬೆಂಗಳೂರು

RELATED ARTICLES

Most Popular

error: Content is protected !!
Join WhatsApp Group