ಮೂಡಲಗಿ: ಸರಕಾರದ ಸಬ್ಸಿಡಿ ಯೋಜನೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಗಮಿಸಿದ ಪ್ರಯುಕ್ತ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ ಯೋಜನೆ, ಉಜ್ವಲಾ ಯೋಜನೆ, ಕಿಸಾನ್ ಮಾನಧನ ಯೊಜನೆ ಹಾಗೂ ಕೇಂದ್ರ ಸರ್ಕಾರದ ಇನ್ನಿತರ ಸಬ್ಸಿಡಿ ಯೊಜನೆಗಳ ಉಪಯೋಗ ಎಲ್ಲರೂ ತೆಗೆದುಕೊಳ್ಳಲಿ ಎನ್ನುವ ಉದ್ದೇಶವನ್ನು ತಿಳಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ನಿಮ್ಮೂರಿಗೆ ಬಂದಿದೆ ಎಂದು ಹೇಳಿದರು.
ರೈತರಿಗೆ ಅನುಕೂಲವಾಗುವ ಸಲುವಾಗಿ ಕೃಷಿ ಬಳಕೆಗೆ ಔಷಧ ಸಿಂಪಡಣೆ ಮಾಡಲು ಡ್ರೋಣ್ ಅನ್ನು, ಗ್ರಾಮದ ಯಾವುದಾದರೂ ಒಂದು ಮಹಿಳಾ ಸಂಘಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ ಹಾಗೂ ಮೋದಿ ಅವರು ದೇಶದ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಉಜ್ವಲ ಯೋಜನೆಯ ಮುಖಾಂತರ ಉಚಿತ ಗ್ಯಾಸ್ ವಿತರಿಸುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಶಿವಾಪೂ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಮಾಡಲು ಎಲ್ಲ ಇಲಾಖೆಯಿಂದ ಸಹಕಾರ ಪಡೆದು ಅಭಿವೃದ್ದಿ ಪಡಿಸಲಾಗುವುದು ಎಂದು ಅವರು ಹೇಳಿದರು,
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಮ ನಿ ಪ್ರ ಅಡವಿಸಿದ್ದರಾಮ ಸ್ವಾಮೀಜಿಗಳು ವಹಿಸಿದರು, ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅದ್ಯಕ್ಷೆ ಯಮನವ್ವ ಗಿದ್ದವ್ವಗೊಳ ವಹಿಸಿದರು, ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಡಿ ಚಿನ್ನನವರ, ಕೆನರಾ ಬ್ಯಾಂಕ್ ಮ್ಯಾನೇಜರ್ ಗಂಗನಾಥ್ ತಿವಾರಿ, ಡಾ.ದೀಪಾ, ಗ್ರಾಮ ಪಂಚಾಯತ್ ಸದಸ್ಯರಾದ ಎಂ ಎಂ ಜುಂಜರವಾಡ, ಬಿ ಆರ್ ಸಾಯನ್ನವರ್, ಮಲ್ಲು ಹಡಗಿನಾಳ, ಪಿ ಎಸ್ ಪಾಟೀಲ್, ಎಸ್ ವಾಯ ಜುಂಜರವಾಡ, ಈರಪ್ಪಾ ಡವಳೇಶ್ವರ, ಪಿಡಿಒ ಎಸ್ ಎಲ್ ಬಬಲಿ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಸವರಾಜ ಗುರುಸಿದ್ದನವರ್ ಸ್ವಾಗತಿಸಿದರು.. ಎಂ ಪಿ ಲಂಗೊಟಿ ಕಾರ್ಯಕ್ರಮನ್ನು ನಿರೂಪಿಸಿದರು. ಎಂ ಬಿ ಕುಡಚಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು..