ಕಲ್ಪವೃಕ್ಷ ಕಾಲೇಜಿನಲ್ಲಿ 27ರಂದು ಗುರುವಂದನಾ ಕಾರ್ಯಕ್ರಮ

Must Read

ಸಿಂದಗಿ: 1983-86 ರ ವಿದ್ಯಾರ್ಥಿ ಬಳಗ ಎಸ್, ಎಸ್, ಹೈಸ್ಕೂಲ್ ಸುಂಗಠಾಣ ಇವರ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಗುರುವಂದನಾ ಹಾಗೂ ಎಸ್.ವ್ಹಿ.ಬಿರಾದಾರ ಇವರ ಷಷ್ಟಿಪೂರ್ತಿ  ಸಮಾರಂಭವನ್ನು ನ. 27 ರಂದು ರವಿವಾರ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

ಈ  ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೆರೂಟಗಿ ಹಿರೇಮಠದ  ಶ್ರೀ ಶಿವಬಸವ ಶಿವಾಚಾರ್ಯರ ಕಾರ್ಯಕ್ರಮದ ದಿವ್ಯಸಾನ್ನಿಧ್ಯದಲ್ಲಿ ಶಾಸಕ ರಮೇಶ  ಭೂಸನೂರ  ಉದ್ಘಾಟನೆ ನೆರವೇರಿಸಲಿದ್ದಾರೆ. ಹುಬ್ಬಳ್ಳಿ ರೇಲ್ವೆ ನಿರ್ವಹಣಾ ಮಂಡಳಿ ಸದಸ್ಯ ಸಿದ್ದು ಭಂಟನೂರ  ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮುಖ  ಎಸ್, ವ್ಹಿ, ಬಿರಾದಾರ ಕಲ್ಪವೃಕ್ಷ ಸಂಸ್ಥೆ ಅಧ್ಯಕ್ಷರು ವಹಿಸಿಕೊಂಡಿದ್ದು ಮುಖ್ಯ ಅತಿಥಿಯಾಗಿ ಮಾಜಿ ವಿ, ಪ, ಸದಸ್ಯ ಅರುಣ ಶಾಪುರ, ಶ್ರೀಶೈಲ್ ಬಿರಾದಾರ ಉಪನಿರ್ದೇಶಕರು ಸಾ, ಶಿ, ಇಲಾಖೆ ಬಾಗಲಕೋಟ, ಎಚ್, ಎಂ, ಹರಾನಾಳ, ಕ್ಷೇತ್ರ ಶಿಕ್ಷಣ ಅಧಿಕಾರಿ ಸಿಂದಗಿ, ಎನ್, ಎನ್, ಪಾಟೀಲ್ ಗಣ್ಯರು ಮೋರಟಗಿ, ಅತಿಥಿಯಾಗಿ ಕೂಡ ಅನೇಕ ಗಣ್ಯರು ಅಧಿಕಾರಿಗಳು ಆಗಮಿಸಲಿದ್ದಾರೆ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group