spot_img
spot_img

ದಮ್ಮೂರಲ್ಲಿ ಗುರುವಂದನ ಕಾರ್ಯಕ್ರಮ

Must Read

- Advertisement -

ಬಾಗಲಕೋಟೆ:- ಜಿಲ್ಲೆಯ ಇಳಕಲ್ಲ ತಾಲೂಕಿನ ದಮ್ಮೂರ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೯೨-೯೩ ನೇ ಸಾಲಿನ ೭ ನೇ ತರಗತಿ ಅಭ್ಯಾಸ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ತಮಗೆ ಕಲಿಸಿದ ಪ್ರಾಥಮಿಕ ಶಾಲಾ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಊರಿನ ಹನುಮಂತ ದೇವರ ಗುಡಿಯಿಂದ ಡೊಳ್ಳುವಾದ್ಯಗಳ ಮೆರವಣಿಗೆಯೊಂದಿಗೆ ಪುಷ್ಪ ವೃಷ್ಠಿಗೈಯುತ್ತ ಪ್ರವಚನಕಾರ ಪ್ರದೀಪ ಗುರೂಜಿಯವರ ನೇತೃತ್ವದಲ್ಲಿ ಎಲ್ಲ ಗುರುಗಳನ್ನು ಹಾರ್ದಿಕವಾಗಿ ವೇದಿಕೆ ಕರೆತರಲಾಯಿತು

ಶಿಕ್ಷಕರುಗಳಾದ ಎಸ್.ಎಸ್.ಹಳ್ಳೂರ ಎಸ್.ಪಿ.ದಾದಿ, ಶ್ರೀಮತಿ ಜಯಶ್ರೀ ಹಾಗೂ ಜೀವನದುದ್ದಕ್ಕೂ ಶಾಲೆಗೆ ಮಕ್ಕಳನ್ನು ಕರೆತರುವ ಕಾಯಕದಲ್ಲಿ ನಿರತರಾದ ಶಂಕರಪ್ಪ ಬಡಿಗೇರ ಅವರಿಗೆ ಹಾಗೂ ಈಗಾಗಲೇ ಲಿಂಗೈಕ್ಯರಾದ ಎಚ್.ಡಿ.ವಡ್ಡರ ಬಿ.ಆರ್.ಬಿನ್ನೆದ, ಶಾಂತಯ್ಯ ಕಟಾಪೂರಮಠ, ಇವರುಗಳ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು ಹಾಗೂ ಶ್ರೀ ದಿಡಗಿನ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಶ್ರೀ ಪ್ರದೀಪ ಗುರೂಜಿಯವರ ಪ್ರವಚನ ಕಾರ್ಯಕ್ರಮದಲ್ಲಿ ಈ ಗುರುವಂದನೆಯನ್ನು ನೇರವೇರಿಸಲಾಗಿತ್ತು. ಪ್ರದೀಪ ಗುರೂಜಿ ಆಶೀರ್ವಚನ ನೀಡಿ, ಈ ಗುರುವಂದನ ಕಾರ್ಯಕ್ರಮ ಮಾಡುವ ಪರಂಪರೆ ಶ್ಲಾಘನೀಯವಾದುದು ಎಂದರು

- Advertisement -

ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ತಿಮ್ಮಾಪೂರ ಗ್ರಾಮದ ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಎಸ್.ಎಸ್.ಹಳ್ಳೂರ, ಇಂಥ ಚಿಕ್ಕಹಳ್ಳಿಯಲ್ಲಿ ಶಿಕ್ಷಕರ ಬಗ್ಗೆ ಇರುವ ಪ್ರೀತಿ ಗುರುಗಳಿಗೆ ಕೊಡುವ ಮಹತ್ವ ವಿಶೇಷವಾದದ್ದು. ಈ ಊರ ಜನರಿಗೆ ಪ್ರವಚನಗಳ ಮೂಲಕ ಆಧ್ಯಾತ್ಮಿಕ ಸಂಸ್ಕಾರ ನೀಡಿದ ಪ್ರದೀಪ ಗುರೂಜಿ ಅವರ ಕಾರ್ಯ ಶ್ಲಾಘನೀಯವಾದುದು. ಮನುಕುಲವನ್ನು ಬದಲಾವಣೆ ಮಾಡುವ ಶಕ್ತಿ ಶಿಕ್ಷಣ ಹಾಗೂ ಆಧ್ಯಾತ್ಮಿಕತೆಗೆ ಇದೆ ಎಂದು ಹೇಳಿದರು.

ಮುಂದುವರೆದು ಈ ಚಿಕ್ಕಹಳ್ಳಿಯಲ್ಲಿ ಇದ್ದು ಮಕ್ಕಳಿಗೆ ಶಿಕ್ಷಣ ಕಲಿಸುತ್ತಾ, ನಾನು ಕಲಿಯುತ್ತ ಉನ್ನತ ಶಿಕ್ಷಣ ಪಡೆಯಲು ಸಹಾಯವಾಯಿತು, ಊರಿನ ಜನರು ೮೦ರ ದಶಕದಲ್ಲಿ ಪ್ರೀತಿಯಿಂದ ಕಂಡ ಕ್ಷಣಗಳನ್ನು ಅವರು ನೆನೆದು ಧನ್ಯತೆಯನ್ನು ಅರ್ಪಿಸಿದರು.

ಗುರು ಎಂಬ ಎರಡಕ್ಷರದ ಶಬ್ದ ಜಗತ್ತನ್ನೇ ಮುನ್ನಡೆಸುತ್ತದೆ. ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಲು ಗುರು ಬೇಕೇಬೇಕು. ಎಂದವರಲ್ಲದೇ ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೆ ಗುರುವಿನ ಅವಶ್ಯಕತೆ ಇದೆ. ಗುರು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ ಎಂದ ಅವರು ಗುರು ಇದರ ಅರ್ಥವೇ ದೊಡ್ಡದು. ಜಗತ್ತಿನಲ್ಲಿ ಗುರುವಿಗಿಂತ ದೊಡ್ಡವರು ಯಾರು ಇಲ್ಲ. ಆದ್ದರಿಂದ ನಮ್ಮ ಹಿರಿಯರು ಆಕಾಶದಲ್ಲಿರುವ ದೊಡ್ಡ ಗ್ರಹಕ್ಕೆ ಗುರು ಎಂದು ಕರೆದರು. ೪೨ ವರ್ಷದ ಹಿಂದೆ ಈ ಊರಿನಲ್ಲಿ ಶಿಕ್ಷಕನಾಗಿದ್ದೆ. ಈ ಸುದೀರ್ಘ ಅವದಿಯ ನಂತರವೂ ನೀವು ನಮ್ಮನ್ನು ನೆನಪಿಟ್ಟು ನಮಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ.

- Advertisement -

ನಿವೃತ್ತ ಶಿಕ್ಷಕ ಎಸ್.ಪಿ.ದಾದಿ ಮಾತನಾಡಿ ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕಂಡು ಗುರುವಿನ ಮನಸ್ಸು ತೃಪ್ತವಾಗಿದೆ ಎಂದು ಹೇಳಿದರು.

ಜಯಶ್ರೀ ದಂಡಿಗಿ ಗುರುಮಾತೆಯವರು ಮಾತನಾಡಿ ಮೂರು ದಶಕಗಳ ನಂತರ ನಾನು ಇಲ್ಲಿಗೆ ಬಂದಿದ್ದೇನೆ ಈ ಊರ ನನಗೆ ದೇವಲೋಕದಂತೆ ಕಾಣುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶರಣಪ್ಪ ಹುಲ್ಲಾಳ ಖ್ಯಾತ ಜನಪದ ಸಾಹಿತಿ ಬಿ.ಆರ್.ಪೋಲಿಸ್‌ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಮಾಜಿಕ, ಸಾಂಸ್ಕೃತಿಕ ಸಾಹಿತ್ಯಿಕ ಪೋಷಕ ಜಿ.ಓ.ಮಹಾಂತಪ್ಪ ವಿಚಾರ ಸಂಕಿರಣ.

ಬದುಕಿ ಸತ್ತವರ ನಡುವೆ, ಸತ್ತು ಬದುಕಿದವರು ತುಂಬಾ ವಿರಳ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದವರು ಅವರುಗಳ ನಿಸ್ವಾರ್ಥ ಸೇವಾ ಕೈಂಕರ್ಯದಿಂದ ಇನ್ನೂ ನಮ್ಮ ನಡುವೆ...
- Advertisement -

More Articles Like This

- Advertisement -
close
error: Content is protected !!
Join WhatsApp Group