ಮುನವಳ್ಳಿ: ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಸೇವಾ ಸಮಿತಿ ಮುನವಳ್ಳಿ ಯಲ್ಲಿ ಹನುಮಾನ್ ಜಯಂತಿ ಆಚರಣೆ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ನಡೆಯಲಿದೆ.
ಶನಿವಾರ ದಿನಾಂಕ 16/04/2022ರಂದು ಬೆಳಿಗ್ಗೆ ರುದ್ರಾಭಿಷೇಕ ಅಲಂಕಾರ ಪೂಜೆ, ಸಾಯಂಕಾಲ 6-30ಕ್ಕೆ ಗಂಟೆಗೆ ಭಜನೆ, ತೊಟ್ಟಿಲು ಕಾರ್ಯಕ್ರಮ, ಹನುಮಾನ್ ಚಾಲೀಸಾ ಪಠಣ. ಮಹಾಮಂಗಳಾರತಿ, ಮಹಾಪ್ರಸಾದ ಸಮರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಸಕಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ರಾಜು ಹಟ್ಟಿ ಪ್ರಕಟಣೆಯಲ್ಲಿ ತಿಳಿಸಿರುವರು.