ಹರಿದಾಸರ ಮಿಲನ ದುರಿತ ಶಮನ ಕಾರ್ಯಕ್ರಮ

Must Read

ಬೆಂಗಳೂರು: ಹರಿದಾಸರ ಮಿಲನ, ಹಾಗೂ ದಾಸೋಪಾಸನ ಮತ್ತು ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವದ  ಕಾರ್ಯಕ್ರಮವನ್ನು ಇದೇ ತಿಂಗಳು ಮೇ 22 ಕ್ಕೆ ಪೂರ್ಣ ವಿದ್ಯಾಪೀಠ ಕತ್ರಿಗುಪ್ಪೆಯಲ್ಲಿ ಬೆಳಗ್ಗೆ 8 ಗಂಟೆ ಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಂಡಿರುತ್ತದೆ.

ಪೇಜಾವರ ಮಠದ ಶ್ರೀ ಶ್ರೀ 1008 ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ ಅವರ ಸಾನ್ನಿಧ್ಯದಲ್ಲಿ ನಡೆಯುತ್ತದೆ.

ಈ ಜ್ಞಾನ ಯಜ್ಞದಲ್ಲಿ ಪ್ರವಚನ ಅನುಗ್ರಹ ಸಂದೇಶ ವಿದ್ವಾ೦ಸರ ಉಪನ್ಯಾಸ ಹಾಗೂ ಸಂಗೀತ ಕಲಾವಿದರಿಂದ ಗಾನ ವೈಭವ ನಡೆಯವುದು. ಹಾಗೇ ಶ್ರೀಗಳ ಅಮೃತ ಹಸ್ತದಿಂದ 120 ಗಾಯಕ ಗಾಯಕಿಯರಿಗೆ 20 ಜನ ಹಿರಿಯರಿಗೆ 10 ಜನ ಚಿಕ್ಕ ಮಕ್ಕಳಿಗೆ ಸನ್ಮಾನ ಮಾಡಲಾಗುವುದು. ದಾಸ ತಪಸ್ವಿ ಶ್ರೀವಿಜಯ ವಿಠ್ಠಲ ಪ್ರಶಸ್ತಿ ಪತ್ರವನ್ನು ಕೊಟ್ಟು ಗೌರವಿಸಲಿದ್ದಾರೆ.

ಎಲ್ಲ ಅಧ್ಯಾತ್ಮ ಬಂಧುಗಳು ಈ ಪವಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ದಿನಾಂಕ 22-5-2022ರ ಭಾನುವಾರದಂದು ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸುರೇಶ್ ಕಲ್ಲೂರ ಅವರು ತಿಳಿಸಿದ್ದಾರೆ.

ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ಜರುಗಲಿರುವ ಈ ಕಾರ್ಯಕ್ರಮವು ಬೆಳಿಗ್ಗೆ 10-00ರಿಂದ ರಾತ್ರಿ 8-00 ಗಂಟೆಯವರೆಗೂ ನಡೆಯಲಿದೆ. ಅಧ್ಯಾತ್ಮ ಬಂಧುಗಳು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಹರಿವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥಾಪಕರಾದ ಡಾ. ಆರ್. ಪಿ.ಕುಲಕರ್ಣಿ ಮತ್ತು ಕಾರ್ಯದರ್ಶಿಗಳಾದ ಸುರೇಶ ಕಲ್ಲೂರ ಸರ್ ಕೋರಿದ್ದಾರೆ.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group