ಮುಧೋಳ – ಬಡವರ, ದೀನದಲಿತರ ನಾಡಿಮಿಡಿತ ಅರಿತು ಕಾರ್ಯನಿರ್ವಹಿಸುವ ನಾಡು ಕಂಡ ಅಪರೂಪದ ರಾಜಕಾರಣಿ ಸಮಾಜವಾದಿ ಚಿಂತಕರಲ್ಲಿ ಬಾಗಲಕೋಟೆಯ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್ ಒಬ್ಬರು ಎಂದು ಶಫರ್ಡ್ ಇಂಟರ್ನ್ಯಾಷನಲ್ ಘಟಕದ ತಾಲೂಕ ಅಧ್ಯಕ್ಷ ಕಾಂಗ್ರೆಸ್ ಯುವ ಮುಖಂಡ ನಿಂಗನಗೌಡ ಮಂಟೂರ ಗೌಡ್ರು ಬಣ್ಣಿಸಿದರು.
ಅವರು ಸೋಮವಾರ ಮುಧೋಳದ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಸಚಿವ ಆರ್.ಬಿ. ತಿಮ್ಮಪೂರ ಅವರ 64 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಅಬಕಾರಿ ಸಚಿವ ತಿಮ್ಮಾಪೂರ ಅವರನ್ನು ಗೌರವಿಸಿ ಮಾತನಾಡಿ ರಾಜಕೀಯದಲ್ಲಿ ಏಳು ಬೀಳುಗಳನ್ನು ಕಂಡರೂ ಧೃತಿಗೆಡದೆ ಜನಮದ್ಯದಲ್ಲಿದ್ದು ಜನಸೇವೆ ಮಾಡಿದ ಜನನಾಯಕ ಆರ್ ಬಿ ತಿಮ್ಮಾಪುರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೆಫರ್ಡ್ ಇಂಟರ್ನ್ಯಾಷನಲ್ ಘಟಕದ ಸದಸ್ಯರು ಇದ್ದರು

