Homeಸುದ್ದಿಗಳುಪ್ರೊಫೆಸರ್ ಎಚ್.ಎಸ್. ಕೆ. ಸಾಹಿತ್ಯ ವಿಚಾರ ಸಂಕಿರಣ

ಪ್ರೊಫೆಸರ್ ಎಚ್.ಎಸ್. ಕೆ. ಸಾಹಿತ್ಯ ವಿಚಾರ ಸಂಕಿರಣ

ಹಾಸನದ ಮನೆ ಮನೆ ಕವಿಗೋಷ್ಠಿ ಬಳಗದ 321 ನೇ ತಿಂಗಳ ಕಾರ್ಯಕ್ರಮವನ್ನು ಮುಂಬರುವ ಸೆಪ್ಟೆಂಬರ್ 1 ರಂದು ಹಿರಿಯ ರಂಗಭೂಮಿ ಕಲಾವಿದರಾದ ಯಲಗುಂದ ಶಾಂತಕುಮಾರ್ ಅವರ ನಿವಾಸದಲ್ಲಿ ,ಹಾಸನ ಶಾಂತಿ ನಗರದ ಉಮಾ ಮಹೇಶ್ವರ ಸಮುದಾಯ ಭವನದ ಎರಡನೇ ತಿರುವು,ಹದಿನಾರನೇ ವಾರ್ಡ್ ,ಮನೆ ಸಂಖ್ಯೆ 272/1 ರಲ್ಲಿ ಏರ್ಪಡಿಸಲಾಗಿದೆ.

ಕಾಯ೯ಕ್ರಮದಲ್ಲಿ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತನಾಮರಾಗಿದ್ದ ಪ್ರೊಫೆಸರ್ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ಬದುಕು ಮತ್ತು ಸಾಹಿತ್ಯ ಕುರಿತು ಭೇಯ೯ ರಾಮಕುಮಾರ್ ಅಧ್ಯಕ್ಷರು. ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ, ಕೆ. ಆರ್. ನಗರ,ಮಾತನಾಡುವವರು.

ಆಗಮಿಸಿದ ಕವಿಗಳಿಂದ ಕವಿಗೋಷ್ಠಿ, ರಂಗಭೂಮಿ ಕಲಾವಿದರಿಂದ ರಂಗಗೀತೆಗಳು, ಗಾಯಕ ಗಾಯಕಿಯರಿಂದ ಬಾವಗೀತೆಗಳು, ಜನಪದ ಗೀತೆಗಳನ್ನು ಹಾಡಲು ಅವಕಾಶ ಇರುವುದಾಗಿ ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿಗಳು ಗೊರೂರು ಅನಂತರಾಜು ತಿಳಿಸಿದಾರೆ.

RELATED ARTICLES

Most Popular

error: Content is protected !!
Join WhatsApp Group